Skip to main content

Posts

Showing posts from June, 2018

ವಿಶ್ವನಾಥ್‍ರವರು ಮತ್ತು ಸಿದ್ದರಾಮಯ್ಯನವರ ಮುಸುಕಿನ ಜಗಳದಲ್ಲಿ ಬಡವಾಗುತ್ತಿರುವ ಕುರುಬ ಸಮಾಜ.

ರಾಜಕೀಯ ಭಿನ್ನಾಭಿಪ್ರಾಯಗಳಿಂದ ಕುರುಬ ಸಮಾಜದ ಹಿರಿಯರಾದ ವಿಶ್ವನಾಥ್‍ರವರು ಮತ್ತು ಸಿದ್ದರಾಮಯ್ಯನವರ ಮುಸುಕಿನ ಜಗಳದಲ್ಲಿ ಬಡವಾಗುತ್ತಿರುವ ಕುರುಬ ಸಮಾಜ. ------------------------------------------------------------------      ಭಾರತ ದೇಶದಲ್ಲಿ 14 ಕೋಟಿಯಷ್ಟು  ಜನಸಂಖ್ಯೆಯನ್ನು  ಹೊಂದಿರುವ ವಿವಿಧ ಹೆಸರುಗಳಿಂದ ಕರೆಯಲ್ಪಡುವ ಕುರುಬ ಸಮಾಜ   ಕರ್ನಾಟಕದಲ್ಲಿ 30 ಜಿಲ್ಲೆಗಳಲ್ಲೂ  ವಿಸ್ತಾರವಾಗಿ  ಹರಡಿಕೊಂಡಿರುವ  ಸಮಾಜ  ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಅಭಿವೃದ್ಧಿಯನ್ನು ಹೊಂದಿಲ್ಲದೇ ಇರುವುದು ದುರಂತ. ಇಂತಹ  ಸ್ಥಿತಿಯಲ್ಲಿ  ಕುರುಬರು ಜೀವಿಸುತ್ತಿರುವಾಗ,  ಸಿದ್ದರಾಮಯ್ಯನವರು ರಾಜ್ಯ ಮುಖ್ಯಮಂತ್ರಿಯಾಗಿದ್ದರು ಎಂಬುದು ಹೆಮ್ಮೆ ತರುವಂತದ್ದು. ಹೆಚ್. ವಿಶ್ವನಾಥ ರವರ ಕೊಡುಗೆಯೂ  ಸಮಾಜಕ್ಕೆ ಅಪಾರವಾದುದು.  ಕಾಗಿನೆಲೆಯಲ್ಲಿ  ಕನಕ ಗುರುಪೀಠ  ಸ್ಥಾಪನೆ ಮಾಡುವಲ್ಲಿ  ಸಂಸ್ಥಾಪನಾ   ಅಧ್ಯಕ್ಷರಾಗಿ ಹಿರಿಯಣ್ಣನ ಸ್ಥಾನದಲ್ಲಿ ನಿಂತಿದ್ದರು. ಸಮಾಜದಲ್ಲಿ ಇರುವ ಬೆರಳಣಿಕೆಯಷ್ಟು ರಾಜಕೀಯ ಮುಖಂಡರÀ ಏಳಿಗೆಯನ್ನು ಕುರುಬ ಸಮಾಜವು  ಬಯಸುತ್ತಿದೆ.  ಆದರೆ  ರಾಜಕೀಯ ವಿಷಯಗಳಿಗೆ ಸಂಬಂಧಪಟ್ಟಂತೆ  ವೈಯಕ್ತಿಕ ಭಿನ್ನಾಭಿಪ್ರಾಯಗಳು...

ಕನಕ ಟಿವಿ ಇದು ಹಾಲುಮತ ಕುರುಬರ ಧ್ವನಿ

ನಮ್ಮದೇ ಆದ ಆಲೋಚನೆಗಳೊಂದಿಗೆ ವ್ಯವಸ್ಥಿತವಾದ ನಕ್ಷೆಯೊಂದಿಗೆ K-KANAKA TVಯನ್ನು ಪ್ರಾರಂಭ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಜವಾಬ್ದಾರಿಯನ್ನು ಯುವಕರಿಗೆ ನೀಡಿ.. ಸಮಾಜದ 100 ನೂರು ಜನ ಯುವಕರನ್ನು ಪತ್ರಕರ್ತರನ್ನಾಗಿಸುವ ಪ್ರಯತ್ನ. ಪತ್ರಿಕೋದ್ಯಮದಲ್ಲಿ  ಗುರುತಿಸಿಕೊಂಡಿರುವ ಸಂಪನ್ಮೂಲ ವ್ಯಕ್ತಿಗಳಿಂದ ಸಂವಹನ ಕಾರ್ಯಗಾರದಲ್ಲಿ  ತರಬೇತಿ  ನೀಡಲಾಗುವುದು. ಮೊದಲ ಹೆಜ್ಜೆ... ಇಡುತ್ತಿದ್ದೇವೆ.. ಒಂದು ಪ್ರಯತ್ನ... ಮಾಡುತ್ತಿದ್ದೇವೆ. ಪ್ರೋತ್ಸಾಹ ನೀಡಿ.. ಸಹಕಾರ ನೀಡಿ.. ಆಸಕ್ತರು ತಮ್ಮ ಫೋನ್ ಮೂಲಕ ಸಂಪರ್ಕಿಸಿ.. ವಿವರಗಳನ್ನು ಈ ಮೇಲ್ ಮೂಲಕ ಕಳುಹಿಸಿಕೊಡಿ. ಅತಿಶೀಘ್ರದಲ್ಲಿಯೇ "ಕಾರ್ಯಾಗಾರದ ಸ್ಥಳ, ದಿನಾಂಕವನ್ನು ತಿಳಿಸಲಾಗುವುದು" ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ : ಶಂಕರ್ ಹೆಗಡೆ 9980744550 ಸೋಮಣ್ಣ ಮಲ್ಲೂರ  8123460108 ವೀರಣ್ಣ ಮೋಡಿ  9663166108 ಶಿವು ಮಗದೂಮ್ಮ  9535491420 ವಿವನ್, ಮೈಸೂರು 8694836999 - ಹಾಲುಮತ ಮಹಾಸಭಾ, ಕುರುಬ ಸಮುದಾಯದ ಸಮೃದ್ಧಿಗೊಂದು ಸಮೂಹ....

ಹಾಲುಮತ ಸಮಾಜದ ಹುಲಿ ಭಾರತ ದೇಶದ ಮೊಟ್ಟ ಮೊದಲ ಮೀಸಲಾತಿ ಜನಕ. ಶ್ರೀ ಶ್ರೀ ಶ್ರೀ ಛತ್ರಪತಿಸಾಹು ಮಹಾರಾಜರವರು

ಕುರುಬರ ಸಾಂಸ್ಕೃತಿಕ ಪರಂಪರೆ ಭಾಗ ೧೩ ಪ್ರೀತಿಯ ಸ್ನೇಹಿತರೆ,ದಯವಿಟ್ಟು ಓದಿ ಇತಿಹಾಸ ತಿಳಿದುಕೊಳ್ಳಿ.. ನಂತರ ಶೇರ್ ಮಾಡಿ.. ಕುಣುಬಿ ಎಂಬುದು ಮಹಾರಾಷ್ಟರದಲ್ಲಿ ಕುರುಬರ ಒಂದು ಪಂಗಡ ಕುರುಬರು ಪಶುಪಾಲನೆಯನ್ನು ನಿಲ್ಲಿಸಿ, ಕೃಷಿಯನ್ನು ಆರಂಭಿಸಿದಾಗ, ಇವರಿಗೆ ಕುಣುಬಿಗಳು ಅಥವಾ ಕುಡಿಒಕ್ಕಲಿಗರು ಎಂಬ ಹೆಸರು ಬಂತು. ಮುಂದೆ ಓದಿ.  ಹಾಲುಮತ ಸಮಾಜದ ಹುಲಿ ಭಾರತ ದೇಶದ ಮುಟ್ಟ ಮೊದಲ ಮೀಸಲಾತಿ ಜನಕ.ನಮ್ಮ ಸಮುದಾಯದ ಹೆಮ್ಮೆಯ ಪ್ರತೀಕ ಶ್ರೀ ಶ್ರೀ ಶ್ರೀ  ಛತ್ರಪತಿಸಾಹು ಮಹಾರಾಜರವರು ಮಹಾರಾಷ್ಟ್ರ ರಾಜ್ಯದವರು.1902ರಲ್ಲಿಯೇ ಬ್ರಾಹ್ಮಣರೇತರಿಗೆ ಶೇಕಡ 50#ಮೀ ಸಲಾತಿಯನ್ನು ನೀಡಿದ ಮಹಾನ್ ಪುರುಷ ನಮ್ಮ ಸಮಾಜದವರು ಎನ್ನುವುದು.ಹೆಮ್ಮೆಯ ವಿಚಾರ  ಮೀಸಲಾತಿ ಜನಕ ಛತ್ರಪತಿ ಶಾಹು ಮಹಾರಾಜ್.. ಮಹಾರಾಷ್ಟ್ರದಲ್ಲಿ ಜೂನ್ 26 ಕ್ರಿ.ಶ .1874 ರಲ್ಲಿ ಇವರ ಜನನವಾಗುತ್ತದೆ.ಶೂದ್ರ ಶೂರ ಅಸ್ಪೃಶ್ಯರ ಸಂಜೀವಿನಿ.ಧೀರ ಧೀಮಂತನಾಯಕರು ಕುಣಬಿ(ಕುರುಬರ)ಜಾತಿಯಲ್ಲಿ ಹುಟ್ಟಿದ ಭಾರತದ ಆಶಾಕಿರಣ..          ಕ್ರಿ.ಶ.1894ರಲ್ಲಿ ಕೋಲ್ಹಾಪುರದ ಮಹಾರಾಜಾರಾಗಿ ಅಧಿಕೃತವಾಗಿ ವೇದೊಕ್ತ ಶಾಸ್ತ್ರ ಪ್ರಕಾರವಾಗಿ ಪಟ್ಟಾಭಿಷೇಕ ಕಾರ್ಯಕ್ರಮ ರಾಜಪುರೋಹಿತ ಶಂಕರಾಚಾರ್ಯ(ಬ್ರಾಹ್ಮಣ) ಇವರಿಂದ ರಾಜಾಭಿಷೇಕದ ಕಾರ್ಯಕ್ರಮ ಜರುಗುವುದು..ಶಾಹು ಮಹಾರಾಜರು ಬ್ರಾಹ್ಮಣ ಸ್ನೇಹಿನಾದ ಇವರ ಗಮನಕ್ಕೆ ಈ ರಾಜಪುರೋಹಿತ ಬ್ರಾಹ್...

ಹಾಲುಮತ ಮಹಾನ್ ಶಿವಶರಣರು ತುರುಗಾಹಿ ರಾಮಣ್ಣ

ಹಾಲುಮತ ಮಹಾನ್ ಶಿವಶರಣರು ತುರುಗಾಹಿ ರಾಮಣ್ಣ ತುರುಗಾಹಿ ರಾಮಣ್ಣ ಶಿವಶರಣ, ವಚನಕಾರ, ಶ್ರೇಷ್ಠ ಜ್ಞಾನಿ, ಆಧ್ಯಾತ್ಮದಲ್ಲಿ ಅತುಳವಾದ ಆಸಕ್ತಿಯನ್ನು ಹೊಂದಿದ್ದವ, ಇವನ ಊರು,ತಂದೆ ತಾಯಿ-ಈ ಬಗ್ಗೆ ಎಲ್ಲಿಯೂ ಉಲ್ಲೇಖವಿಲ್ಲ. ಕಾಲ ಈತನ ಕಾಲ ಸು. 1160 ಅಂದರೆ ಈತ ಬಸವಣ್ಣ, ಅಲ್ಲಮಪ್ರಭು ಮುಂತಾದವರ ಸಮಕಾಲೀನ, ಬಸವಣ್ಣ, ಚೆನ್ನಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ-ಇವರು ಲಿಂಗೈಕ್ಯರಾದ ಸಮಯದಲ್ಲಿ ಜೀವಿಸಿದ್ದನೆಂದೂ ಅನಂತರ ಇವನೂ ಲಿಂಗೈಕ್ಯನಾದನೆಂದೂ ತಿಳಿದುಬರುತ್ತದೆ. ಕಾಯಕ ಬಸವಣ್ಣನವರ ಭಕ್ತಿಪಂಥಕ್ಕೆ ಸೇರಿದ ಈತನಿಗೆ ಶಿವಶರಣರ ದನಗಳನ್ನು ಕಾಯುವುದೇ ಕಾಯಕವಾಗಿದ್ದಿತು. ಸರಳವಾದ ನಿರಾಡಂಬರವಾದ, ಬಹು ಸುಂದರವಾದ ಜೀವನ ಇವನದಾಗಿದ್ದಿತು. ನಿತ್ಯವೂ ನೇಮದಂತೆ ಶರಣರ ಮನೆಯ ಬಾಗಿಲಿಗೆ ಹೋಗಿ ಕಟ್ಟಿದ ಹಸು ಕೂಡಿದ ಹಸು ಬಿಡಿರೆ-ಎಂದು ಕೂಗುತ್ತಿದ್ದ. ಶರಣರ ಸತಿಯರು ಬಿಟ್ಟ ದನಗಳನ್ನು ದಿನವಿಡೀ ಕಾಯ್ದು ಸಂಜೆಗೆ ದೊಡ್ಡಿಗಳಿಗೆ ತಂದು ಕೂಡುತ್ತಿದ್ದ. ದಿನವೂ ಬಣ್ಣಬಣ್ಣದ ದನಗಳನ್ನು ನೋಡುತ್ತ ಅವನ್ನು ಮುದ್ದಾಡುತ್ತ ವಿವಿಧ ಹೆಸರುಗಳಿಂದ ಅವನ್ನು ಕರೆಯುತ್ತ ಕಾಲವನ್ನು ಬಹು ಸಂತಸದಿಂದ ಕಳೆಯುತ್ತಿದ್ದ. ಹಸುವಿಗೆ ಹಾಗ, ಎತ್ತಿಂಗೆ ಹಣವಡ್ಡ, ಕರುವಿಗೆ ಮೂರು ಹಣ ಹೀಗೆ ಕೂಲಿಯನ್ನು ತೆಗೆದುಕೊಂಡು `ಅವಕಾವಲ್ಲಿಯಾದರೂ ಭಾವಶುದ್ಧವಾಗಿರಬೇಕು ಎಂಬ ಜೀವನಸೂತ್ರವನ್ನು ಹಿಡಿದು, ಊರಿನ ದನಕಾಯುವ ಕೆಲಸದಲ್ಲಿಯೇ ಮಹತ್ತನ್ನು ಕಂಡುಕೊಂಡು ಈತ ಮುಕ್ತಿಯ...

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜೀವನ ಚರಿತ್ರೆಯನ್ನೊಮ್ಮೆ ಓದಿ

ಸಂಗೊಳ್ಳಿ ರಾಯಣ್ಣ  –  ಬ್ರಿಟಿಷರ  ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರಲ್ಲೊಬ್ಬ.  ಕಿತ್ತೂರು ಚೆನ್ನಮ್ಮಳ  ಬಲಗೈ ಬಂಟನಾದವನು ಸಂಗೊಳ್ಳಿ ರಾಯಣ್ಣ. ಪರಿಚಯ ಸಂಪಾದಿಸಿ ಬೆಳಗಾವಿ  ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿರುವ ನೇಗಿನಹಾಳ ಗ್ರಾಮವು ಕೆಂಚವ್ವನ ತವರು ಮನೆಯಾಗಿದ್ದರು ಸಂಗೊಳ್ಳಿಯು ರಾಯಣ್ಣನ ಜನ್ಮಸ್ಥಳ ಹಾಗೂ ಹೋರಾಟದ ಭೂಮಿಯಾಗಿದೆ. ಚೆನಮ್ಮಳ ಆಸ್ತಾನದಲ್ಲಿ ವಾಲಿಕರ್ ವೃತ್ತಿ ಮಾಡುವ ಕುರುಬ ಮನೆತನದವನಾಗಿದ್ದ ರಾಯಣ್ಣನನ್ನು ಜನ, ರಾಯಾ ಎಂದು ಕರೆಯುತ್ತಿದರು. ಅಷ್ಠೆ ಅಲ್ಲದೆ ಈತನು ಗೇರಿಲ್ಲಾ ತಂತ್ರದ ರೂವಾರಿಯಾಗಿದ್ದನು.  ಬ್ರಿಟಿಷರ  ವಿರುದ್ಧದ ಯುದ್ಧದಲ್ಲಿ ಚನ್ನಮ್ಮ ಹಾಗು ರಾಯಣ್ಣ ಇಬ್ಬರೂ ಸೆರೆಯಾಳಾದರು.  ಬ್ರಿಟಿಷರು ಚನ್ನಮ್ಮನನ್ನು  ಬೈಲಹೊಂಗಲದಲ್ಲಿ  ಸೆರೆಯಲ್ಲಿಟ್ಟರು. ಸಂಗೊಳ್ಳಿ ರಾಯಣ್ಣನನ್ನು ಬ೦ಧಿಸಿ ನ೦ದಗಡ ದಲ್ಲಿ ಗಲ್ಲಿಗೆರಿಸಿದರು.  ಜನವರಿ ೨೬  ೧೮೩೧ರಂದು ಗಲ್ಲಿ ಗೇರಿಸಿದರು. ಸಂಗೊಳ್ಳಿ ರಾಯಣ್ಣ ಜನಿಸಿದ ದಿನಾಂಕವಾದ  ಆಗಸ್ಟ್ ೧೫  ೧೭೯೮ ,  ಭಾರತಕ್ಕೆ  ಸ್ವಾತಂತ್ರ್ಯ ದೊರೆತ ದಿನಾಂಕವಾದರೆ, ಆತ ಗಲ್ಲಿಗೇರಿದ ದಿನಾಂಕ  ಜನವರಿ ೨೬ , ಭಾರತವು  ಗಣರಾಜ್ಯವೆಂದು  ಘೋಷಿಸಿದ ದಿನಾಂಕವಾಗಿದೆ. ರಾಯಣ್ಣನ ಉಕ್ತಿ, “ನನ್ನ ಕೊನೆ ಆಸೆ ಏನೆಂದರೆ, ಮತ್ತೆ ನಾನು ಈ ದೇಶದಲ್ಲಿ...

ಕುರುಬರು ಭಾರತದ ಇತಿಹಾಸದ ಮೊದಲ ಸಾಮ್ರಾಜ್ಯವಾದ ಮೌರ್ಯ ಸಾಮ್ರಾಜ್ಯವನ್ನು ಕಟ್ಟಿದವರು.

ಕುರುಬ ಒಂದು ಹಿಂದು ಸಮುದಾಯದ ಹೆಸರು. ಕುರುಬ ಎಂದರೆ ಹುಡುಕುವ ಅಥವ ಪಡೆಯುವ ಎಂದು ಅರ್ಥ ಬರುತ್ತದೆ. ಉದಾಹರಣೆ: ಜೇನು ಕುರುಬ ಜಾತಿ ಎಂದರೆ ಜೇನು ಹುಡುಕುವ ಜಾತಿ. ಕುರುಬರು ಹಾಲುಮತ ಅನುಯಾಯಿಗಳು. ಕುರುಬ ಎಂದರೆ ಜ್ಞಾನವನ್ನು(ಭ) ಹುಡುಕುವವನು (ಕುರು) ಎಂಬ ದಾರ್ಮಿಕ ಅರ್ಥವು ಇದೆ. ಕುರುಬ ಜಾತಿಯು ಅತಿ ಪುರಾತನವಾದ ಜಾತಿ.  ಇತಿಹಾಸ ಪೂರ್ವ ಕುರುಬ ಜನಾಂಗ ತುಂಬಾ ಪುರಾತನವಾದ ಜನಾಂಗ , ರಾಮಾಯಣ ಮತ್ತು ಮಹಾಭಾರತ ಕಾಲದಲ್ಲಿ ಕುರು ವಂಶ ಮತ್ತು ಯದು ವಂಶಗಳ ಪ್ರಸ್ತಾವನೆಯಾಗಿದೆ. ಮಾನವನು ಮೊದಲು ಕಾಡುಗಳಲ್ಲಿ ಬೇಟೆ ಆಡಿ ಮತ್ತು ಅಲೀದು ಗೆಡ್ಡೆ, ಗೆಣಸು ತಿನ್ನುತಿದ್ದ , ಕ್ರಮೇಣ ಅವನು ಪ್ರಾಣಿಗಳನ್ನು ಪಳಗಿಸಿ ಸಾಕ ತೊಡಗಿದ, ಆ ನಂತರ ಅವನು ವ್ಯವಸಾಯ ಮಾಡುವದನ್ನು ಕಲಿತ, ನಂತರ ಅವನು ಹಳ್ಳಿಗಳಲ್ಲಿ ವಾಸಿಸ ತೊಡಗಿದ. ಕುರುಬರು ಈ ಎಲ್ಲ ಮಾನವನ ಆಯಾಮಗಳನ್ನು ದಾಟಿದವರು. ಅತಿ ಪುರಾತನವಾದ ಈ ಸಮುದಾಯದಿಂದ ಕಾಲ ಕ್ರಮೇಣ ಇತರೆ ಜನಾಂಗದವರು ಬೇರೆಯಾಗ ತೊಡಗಿದರು. ಉದಾಹರಣೆಗೆ ವಕ್ಕಲುತನ ಮಾಡುವನು ವಕ್ಕಲಿಗನಾದ, ಬೇಟೆಯಾಡು ವವನು ಬೇಡನಾದ , ಮಡಿಕೆ ಮಾಡುವವನು ಕುಂಬಾರನಾದ , ಈ ಇತರೆ ಜನಾಂಗದವರು ಮಾನವನ ಬೇಡಿಕೆಗಳಿಗೆ ಅನುಗುಣವಾಗಿ ತಮ್ಮ ವೃತ್ತಿಗಳನು ಮಾಡತೊಡಗಿದರು. ಹೀಗೆ ಪುರಾತನವಾದ ಕುರುಬ ಮತ್ತು ಯಾದವ ವಂಶಗಳಿಂದ ಸಣ್ಣ ಪುಟ್ಟ ಜಾತಿಗಳು ಹುಟ್ಟಿಕೊಂಡವು. ಭಾರತ ಇತಿಹಾಸ . ಕುರುಬರು ಭಾರತದ ಇತಿಹಾಸದ ಮೊದಲ ಸಾಮ್ರಾಜ್ಯವಾದ ಮೌರ್ಯ...

ಕನಕದಾಸರು ದ್ವೈತ -ಅದ್ವೈತದ ದುರ್ಬೀನಿಗೂ ನಿಲುಕದ ಮಹಾನಕ್ಷತ್ರ!

ಕನಕದಾಸರು ದ್ವೈತ -ಅದ್ವೈತದ ದುರ್ಬೀನಿಗೂ ನಿಲುಕದ ಮಹಾನಕ್ಷತ್ರ! #ಕನಕ_ಜಯಂತಿಯ_ಪ್ರಯುಕ್ತ_ಈ_ಲೇಖನ_ಓದಿ ಕನಕರ ಆದರ್ಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳೋಣ ಕನ್ನಡದ ಭಕ್ತಿ ಪಂಥವನ್ನು ಬೆಳಗಿದ ಕನಕದಾಸರ ಬದುಕು ಮತ್ತು ಸಾಹಿತ್ಯ ಹಲವಾರು ನಿಟ್ಟಿನಿಂದ ವೈಶಿಷ್ಟ್ಯಪೂರ್ಣವೂ ಗಮನಾರ್ಹವೂ ಆಗಿವೆ. ಕೀರ್ತನೆಗಳು, ಉಗಾಭೋಗ, ಉದಯರಾಗ, ಡೊಳ್ಳುಪದ, ಮುಂಡಿಗೆ ಇತ್ಯಾದಿಗಳಲ್ಲದೆ ದ್ವಿಪದಿ, ತ್ರಿಪದಿ, ಚೌಪದಿ, ಷಟ್ಪದಿ, ಸಾಂಗತ್ಯ ಮುಂತಾದ ವಿವಿಧ ಕಾವ್ಯಶೈಲಿಯ ದೀರ್ಘ ಕೃತಿಗಳು ಕನಕದಾಸರ ಕೃತಿಶ್ರೇಣಿಯನ್ನು ವೈವಿಧ್ಯಮಯವಾಗಿಸಿವೆ. ಯಾವುದೇ ಸಾಧು ಸಂತರ ಬಾಳುವೆಯಲ್ಲಿ ಕಂಡುಬರುವ ಹಠಾತ್ ಪರಿವರ್ತನೆ ಕನಕದಾಸರ ಹರಯದಲ್ಲಿ ಆದರೂ, ನಿರಂತರ ತಾತ್ವಿಕ ಮಂಥನ ಮತ್ತು ಸಾಮಾಜಿಕ ಅಸಮಾನತೆಯ ಘರ್ಷಣೆಗಳೊಂದಿಗೆ ಬೆರಗಾಗುವಂತೆ ಬೆಳೆದು ನಿಂತ ವ್ಯಕ್ತಿತ್ವ ಅವರದು. ದಾಸರನ್ನು ಅರ್ಥೈಸುವುದರಲ್ಲಿ ಜಾತಿ-ಪಂಥಕ್ಕೆ ಜೋತುಬಿದ್ದ ತಾತ್ವಿಕ ಮಾಪನವನ್ನು ಹಿಡಿದು ಹೊರಟವರಿಗೆ ಕನಕರು ಕಾಣುವ ಬಗೆಯೇ ಬೇರೆ. ಈಗ ನಂಬಿಕೆ ಇರುವಂತೆ ಕನಕದಾಸರು ಜಾತಿಯಿಂದ ಕುರುಬರು. ಇದನ್ನು ಅವರು ರಚಿಸಿರುವ "ದ್ಯಾವೀ ನಮ್ಮ ದ್ಯಾವರು ಬಂದರು ಬನ್ನೀರೇ" ಎಂಬ ಡೊಳ್ಳಿನ ಹಾಡು  "ನಾವು ಕುರುಬರು ನಮ್ಮ ದೇವರು ಬೀರಯ್ಯ"  ಎಂಬ ಕೃತಿಗಳು ಸಮರ್ಥಿಸುತ್ತವೆ. ಆದರೆ ದಾಸರು ಜಾತಿಯ ಶೃಂಕಲೆಗಳಲ್ಲಿ ಎಂದಿಗೂ ಬಂಧಿತರಾಗುಳಿದವರಲ್ಲ. ಅದರಾಚೆ ಬಂದು ಅಂತರ್ವಿಕಸನದ ಪಥದಲ...

ಹಾಲುಮತ ಮಹಾಸಭಾ, ಕುರುಬ ಸಮುದಾಯದ ಸಮೃದ್ಧಿಗೊಂದು ಸಮೂಹ

ಮನೆಯಲ್ಲಿ ಮಗ ಹಠ ಮಾಡ್ತಾನೆ.. ನನಗದು ಬೇಕೇ ಬೇಕು ಅಂತ.. ತಂದೆ ತಾಯಿಗಳು ಮಗನ ಆಸೆಯನ್ನು ಪೂರೈಸಲಾರದೇ ದೊಡ್ಡದ್ದನ್ನು ಕೊಡಿಸಲು ಸಾಧ್ಯವಾಗದೇ ಹೋದ್ರು ಸಣ್ಣದ್ದನ್ನು ಕೊಡಿಸಿ.. ಸಮಾಧಾನ ಮಾಡುತ್ತಾರೆ... ---------------------------------------------------------------- **ನಮ್ಮ ಕುರುಬ ಸಮಾಜದಲ್ಲೂ ಇಂತದ್ದೇ ಪರಿಸ್ಥಿತಿ. ಈ ಚಿತ್ರದಲ್ಲಿರುವ ವೀರಣ್ಣ ಮೋದಿ ಬೆಳಗಾವಿ ಜಿಲ್ಲೆ, ಗೋಕಾಕ ತಾಲ್ಲೂಕು, ಯಾದವಾಡದವರು. ಸಮಾಜದ ಕೆಲಸ ಅಂದ್ರೆ,  ರಾಯಣ್ಣ ಅಂದ್ರೆ ಎಲ್ಲಿಲ್ಲದ ಅಭಿಮಾನ. ವೀರಣ್ಣನಿಗೂ ಮುಂದುವರೆದ ಸಮಾಜದವರಂತೆ ನಮ್ಮ ಕುರುಬ ಸಮಾಜವೂ ಬೆಳೆಯಬೇಕು ನಾವು ಅವರಂತಾಗಬೇಕು ಅನ್ನೋ ನೋವು. ಹಾಲುಮತ ಮಹಾಸಭಾದಲ್ಲಿ ಸಕ್ರೀಯರಾಗಿ, ಸಮಾಜದ ಕೆಲಸಗಳಲ್ಲಿ ಭಾಗಿಯಾಗುತ್ತಾರೆ. ನಮ್ಮ ಕುರುಬ ಸಮಾಜಕ್ಕೊಂದು "ಟಿವಿ ಚಾನೆಲ್ " ಬೇಕು ಅನ್ನೋ ಆಸೆ ಕುರುಬರಿಗೆಲ್ಲರಿಗೂ ಇದೆ. ಆದರೆ ಕುರುಬರ ದುರಾದೃಷ್ಟ.. ಕುರುಬರನ್ನು ಯಾರೂ ಕೇರ್ ಮಾಡುತ್ತಿಲ್ಲ. ವೀರಣ್ಣ ಮೋದಿ ಮೇಕ್ ನ್ಯೂಸ್ ಅನ್ನೋ ಆಪ್ ಡೌನ್ ಲೋಡ್ ಮಾಡಿಕೊಂಡರು.. ತನಗೆ ಸಿಕ್ಕ ಸಣ್ಣ ಪುಟ್ಟ ವಿಡಿಯೋಗಳನ್ನು ಎಡಿಟ್ ಮಾಡಿ ಅದರ ಮೇಲ್ಭಾಗದಲ್ಲಿ "ಶ್ರೀಕನಕ ಟಿವಿ" ಅನ್ನೋ ಲೋಗೋ ಅಂಡಿಸಿದರು. ಬ್ರೇಕಿಂಗ್ ನ್ಯೂಸ್ ಸ್ಥಳದಲ್ಲಿ ಹಾಲುಮತ ಮಹಾಸಭಾ ಬರುವಂತೆ ಟೈಪಿಸಿದರು, Scrollನಲ್ಲಿ ಅದಕ್ಕೆ ಸಂಬಂಧ ಪಟ್ಟ ವಿವರಗಳನ್ನು ಬರೆದರು ಪೇಸ್ ಬುಕ್ ವಾಟ್ಸಪ್ ...

ಕುರುಬರೆ ಇದರ ಸದುಪಯೋಗ ಪಡಿಸಿಕೊಳ್ಳಿ

17-6-2018 ರಂದು ಗದುಗಿನ ಕನಕಭವನ ದಲ್ಲಿ ವಧು-ವರರ ಸಮಾವೇಶ ಇದೆ. ಇದರ ಸದುಪಯೋಗ ಸಮಾಜ ಬಾಂಧವರು  ಪಡೆದುಕೊಳ್ಳಲು ಹಾಲುಮತ ಮಹಾಸಭಾದ ವಿನಂತಿ ಅದೆ.

ಹಂಪಿಯ ವಿರುಪಾಕ್ಷನೇ ಕುರುಬರ ಬೀರಪ್ಪ !!!!

ಕುರುಬರ ಇತಿಹಾಸ ಪರಂಪರೆ, ಹಂಪಿಯ ವಿರುಪಾಕ್ಷನೇ ಕುರುಬರ ಬೀರಪ್ಪ !!!! ( ಕೆಲವು ಹೊಸ ಹೊಳವುಗಳು) ಮಾನ್ಯ ಹಾಲುಮತ ಸಮಾಜದ ಅಧ್ಯಯನಪ್ರಿಯ ಮಿತ್ರರೆ ಮತ್ತು ಯುವಕರೆ, "ವಿಜಯನಗರ ಸಾಮ್ರಾಜ್ಯ" ಸ್ಥಾಪನೆ ಮಾಡಿದ ಸಂಗಮ ವಂಶಸ್ಥರು ಕುರುಬ ಕುಲಪುತ್ರರೆಂದು ಭಾರತೀಯ ಮತ್ತು ವಿದೇಶಿ ವಿದ್ವಾಂಸರು ಸಾಬೀತು ಪಡಿಸಿದ್ದಾರೆ. ರಾಬಟ೯ ಸಿವೆಲ್, ಜಾನ್ ಕೆಲ್ಸೆಲ್, ಗಸ್ಟೋವ್ ಅಪಟ೯, ಡಾ.ಗ್ರೀಗೆ, ಎಂತೋವೆನ್ ಮೊದಲಾದ ವಿದೇಶಿ ವಿದ್ವಾಂಸರು ಹಾಗೂ ಡಾ. ವಸುಂದರಾ ಫಿಲಿಯೋಜ, ಡಾ. ಸಾಲೆತೋರ್, ಡಾ. ಎಂ.ಎಂ. ಕಲಬುಗಿ೯, ಎಸ್. ಶ್ರೀಕಂಠಯ್ಯ, ಡಾ.ಪಿ.ವಿ.ಕೃಷ್ಣಮೂತಿ೯ ಮೊದಲಾದ ೫೦ಕ್ಕೂ ಹೆಚ್ಚು ವಿದ್ವಾಂಸರು ಸಂಗಮರು ಕುರುಬರೆಂದೇ ಹೇಳಿದ್ದಾರೆ. ಇವರು ಪ್ರಾಚೀನ ಕಾಲದ ಶಾಸನ, ಕಾವ್ಯ, ಕೈಪಿಯತ್ತು, ವಚನ , ದಾಖಲೆಗಳನ್ನು ಅಧ್ಯಯನ ಮಾಡಿ, ಈ ತೀಮಾ೯ನಕ್ಕೆ ಬಂದಿರುತ್ತಾರೆ. ಆದರೆ ಇವೆಲ್ಲವನ್ನು ಹೊರತುಪಡಿಸಿ, ಪ್ರಸ್ತುತ ದೇವಾಲಯಗಳ ಶಿಲ್ಪಗಳು, ಆಚರಣೆಗಳು, ಸಂಪ್ರದಾಯ ಮತ್ತು ನಡಾವಳಿಗಳ ಆಧಾರದ ಮೇಲೆ ಅಧ್ಯಯನ ನಡೆಸಿದ  ಬಳ್ಳಾರಿಯ "ಹಾಲುಮತ ಹುಕ್ಕಬುಕ್ಕ ಪ್ರತಿಷ್ಟಾನ" ದ ಯುವ ಅಧ್ಯಯನಕಾರರು ಅನೇಕ ಹೊಸ ಹೊಳವುಗಳನ್ನು ಕಂಡುಕೊಂಡಿದ್ದಾರೆ. ಡಾ. ಲಿಂಗದಹಳ್ಳಿ ಹಾಲಪ್ಪ ಅವರ ನೇತೃತ್ವದ ಅಧ್ಯಯನ ತಂಡದ ಶ್ರೀ ವೆಂಕಟೇಶ, ಶ್ರೀ ಟಿ.ಕೆ. ಕಾಮೇಶ, ಶ್ರೀ ಪೋಲಯ್ಯ ಮೊದಲಾದ ಯುವಕರ ಕಾಯ೯ ಇತಿಹಾಸದಲ್ಲಿ ಅಚ್ಚಳಿಯದೇ ಉಳಿಯುವಂತಹುದಾಗಿದೆ.  ಕನಾ...

ಮಧ್ಯ ಭಾರತವನ್ನಾಳಿದ ಕುರುಬ ಅರಸರು

ಕುರುಬರ ಇತಿಹಾಸ ಪರಂಪರೆ, ಭಾಗ ೬ ಮಧ್ಯ ಭಾರತವನ್ನಾಳಿದ ಕುರುಬ ಅರಸರು ಸ್ನೇಹಿತರೆ, ಪ್ರಾಚೀನ ಶಾಸನ, ಕೈಪಿಯತ್, ಕಾವ್ಯ, ಗೆಜೆಟಿಯರಗಳ ಆಧಾರದ ಮೇಲೆ ಮಧ್ಯ ಭಾರತವನ್ನು ಆಳಿದ ರಾಜವಂಶಗಳನ್ನು ವಿದ್ವಾಂಸರು ಈ ರೀತಿ ಸಂಗ್ರಹಿಸಿದ್ದಾರೆ. ವಿದ್ವಾಂಸರಾದ ವಿದ್ಯಾಪ್ರಕಾಶ ತ್ಯಾಗಿ ಅವರು ತಮ್ಮ "ರಾಯಲ್ ಟ್ರೈಬ್ಸ ಆಪ್ ಅನ್ ಡಿವೈಡೆಡ್ ಇಂಡಿಯಾ" (ಅವಿಭಜಿತ ಭಾರತದ ರಾಜವಂಶೀಯ ಬುಡಕಟ್ಟುಗಳು) ಎಂಬ ಕೃತಿಯಲ್ಲಿ ಕುರುಬರ ಕುರಿತು ಚಚಿ೯ಸುತ್ತ, ಉತ್ತರ ಭಾರತದಲ್ಲಿ ಕುರುಬರನ್ನು ಪಾಲರು, ಯಾದವರೆಂತಲೂ, ಮಧ್ಯ ಭಾರತದಲ್ಲಿ ಧನಗಾರರು, ಕುರುಬರು ಎಂತಲೂ ದಕ್ಷಿಣದ ಕಡೆ ಕುರುವರ್, ಕುರುಂಬರ್ ಪರಿವಾರ್, ಇಡೈಯರ್ ಇತ್ಯಾದಿಯಾಗಿ ಕರೆಯುತ್ತಾರೆ. ಕನಾ೯ಟಕದಲ್ಲಿ "ಹಂಡೆ" ಎಂತಲೂ ಕರೆಯುತ್ತಾರೆ. ಯಾದವರಲ್ಲಿ ಅನೇಕ ಪಂಗಡಗಳಿವೆ. ಉದಾಹರಣೆಗೆ ಗೋಪಾಲಕರು, ಮೇಷಪಾಲಕರು ಇತ್ಯಾದಿ. ಇವರೆಲ್ಲ ಒಂದೇ ಬೇರಿನಿಂದ ಬಂದವರು." ಎಂದು ದಾಖಲಿಸಿದ್ದಾರೆ. ಒಂದು ಆಶ್ಚಯ೯ಕರ ವಿಚಾರವೆಂದರೆ, ಇಡೀ ಪುಸ್ತಕದ ಉದ್ದಕ್ಕೂ ಕಣ್ಣಲ್ಲಿ ಎಣ್ಣೆ ಹಾಕಿ ಹುಡುಕಿದರೂ ಸಾಮ್ರಾಜ್ಯವನ್ನು ಕಟ್ಟಿ, ರಾಜರು, ಚಕ್ರವತಿ೯ಗಳಾಗಿ ಆಳಿದ ಕನಾ೯ಟಕದ ಇತರೆ ಜನಾಂಗಗಳ ಹೆಸರುಗಳು ಎಲ್ಲೂ ಸಿಕ್ಕುವುದಿಲ್ಲ. ಹಾಗಾದರೆ ನಾನು ನಾಯಕ, ನಾನು ಹಂಡೆ ವಜೀರ, ನಾನು ಗೌಡ, ನಾನು ಇತ್ಯಾದಿ ಅನ್ನುವವರು ಎಲ್ಲಿದ್ದಾರೆ? ಸ್ನೆಹಿತರೆ, ೧. ಕುರುಬಗ ಹೂ ಕೊಟ್ಟರೆ ಕುಂಡೆಯಲ್ಲಿ ಇಟ್ಕೋತ...

ಬೀರಪ್ಪ ದೇವರ ಪವಾಡಗಳ ಬಗ್ಗೆ ತಿಳಿದುಕೊಳ್ಳಿ

ಸ್ವಲ್ಪ ತಾಳ್ಮೆಯಿಂದ ಓದಿ ಹಾಗೆ  ಶೇರ್ ಮಾಡಿ ಬೀರೇ ದೇವರ ಆಚರಣೆ ದಳಿ ಕಟ್ಟುವ ಸೇವೆ (ಕುರುಬ ಜನಾಂಗದ ಬೀರೇದೇವರ ಒಂದು ಪ್ರಾಚೀನ ಆಚರಣೆ) ಹಾಲುಮತಸ್ಥರಾದ ಕುರುಬ ಜನಾಂಗವು ಭಾರತದ ಮೂಲ ಜನಾಂಗಗಳಲ್ಲಿ ಒಂದಾಗಿದ್ದು, ಅದು ತನ್ನದೇ ಆದ  ಪ್ರಾಚೀನ ಧಾರ್ಮಿಕ ಪರಂಪರೆಗಳನ್ನು ಹೊಂದಿದೆ. ಧಾರ್ಮಿಕವಾಗಿ ಕುರುಬರು ಶೈವ ಪರಂಪರೆಯವರೂ, ಸಾಮಾಜಿಕವಾಗಿ ವೀರಪರಂಪರೆಯವರೂ ಆಗಿದ್ದಾರೆ. ಇವರ ಕುಲದೈವ ಬೀರಪ್ಪನಾಗಿದ್ದರೂ, ಇವರು ಮೈಲಾರಲಿಂಗ, ಮಾಳಿಂಗರಾಯ, ಹುಲ್ಲಪ್ಪ-ಚಂದಪ್ಪ, ಸೋಮೇಶ್ವರ, ಚಿಂಚಲಿ ಮಾಯವ್ವ ಮೊದಲಾದ ದೈವಗಳನ್ನು ಮನೆದೇವರೆಂದು ತಿಳಿದು ಪೂಜಿಸುತ್ತಾರೆ. ಮಧ್ಯಕರ್ನಾಟಕದ ಕೆಲವು ಸೀಮಿತ ಪ್ರದೇಶಗಳಲ್ಲಿ ಪೂಜೆಗೊಳ್ಳುತ್ತಿರುವ ಸೋಮೇಶ್ವರ ಅಥವಾ ಸೋಮಲಿಂಗ ಅಥವಾ ಸೋಮಬೀರಪ್ಪನ ಆಚರಣೆಗಳಲ್ಲಿ ಭೃಂಗಿ ಸೇವೆಯೂ ಒಂದಾಗಿದೆ. ಓಲಗ ಅಥವಾ ವಾಲಗ ಎಂಬ ಪದಗಳ ನಿಷ್ಪತ್ತಿ ಕುರಿತು ವಿಭಿನ್ನ ಅಭಿಪ್ರಾಯಗಳಿವೆ. ‘ವಾಲಗ’ ಎಂದರೆ ಬಾಯಿಯಿಂದ ಊದಿ ನಾದ ಹೊರಡಿಸುವ ಒಂದು ವಾದ್ಯವೆಂದೂ, ಅದನ್ನು ಊದುತ್ತ ಸೇವೆ ಸಲ್ಲಿಸುವುದು ವಾಲಗಸೇವೆ ಯೆನ್ನಿಸಿಕೊಳ್ಳುತ್ತದೆಯೆಂಬ ಅಭಿಪ್ರಾಯ ಒಂದು ವರ್ಗದ್ದು. ಆದರೆ ಬೀರಪ್ಪನ ಭಕ್ತ ಪರಿವಾರದಲ್ಲಿ ಈ ವಾದ್ಯ ಮತ್ತು ಅದನ್ನು ನುಡಿಸುವ ಮನೆತನಗಳು ಇದ್ದರೂ, ಓಲಗ ಸೇವೆಯಲ್ಲಿ ಇದು ಕಂಡುಬರುವುದಿಲ್ಲ. ಓಲಗ ಎಂದರೆ ಆಸ್ಥಾನ, ರಾಜಸಭೆ ನಡೆಯುವ ಸ್ಥಳ ಎಂಬ ಅರ್ಥವೂ ಇದೆ. ಬೀರಪ್ಪನ ಓಲಗಸೇವೆ ಎಂದರೆ ಬೀರಪ್ಪನ ಸನ್ನಿ...

ಕಷ್ಟದ ಕಾಲದಲ್ಲೂ ನಿಮ್ಮ ಕೈ ಹಿಡಿದ ಕುರುಬರ ಕಡೆ ಗಮನ ಕೊಡಿ ಸಿದ್ದರಾಮಯ್ಯರವರೆ

"ಮನೆಗೆ ಮಾರಿ.. ಊರಿಗೆ ಉಪಕಾರಿ" ಸಿದ್ದರಾಮಯ್ಯ ನವರನ್ನು ಕೈ ಹಿಡಿದಿದ್ದು ಮನೆಯವರು (ಕುರುಬರು) ಊರಿ ನವರು ಕೇಳದೇ ಇದ್ರೂ ಘೋಷಣೆ ಮಾಡಿ ಭಾಗ್ಯಗಳನ್ನು ನೀಡಿದ ಸಿದ್ದರಾಮಯ್ಯ ನವರಿಗೆ       ಮುಸ್ಸಂಜೆಯಲ್ಲಿ...ಊರಿನವರು ಕೊಟ್ಟಿದ್ದು "ಕೈ".     ಐದು ವರ್ಷಗಳ  ಕಾಲ ನಮ್ಮ‌ ಮನೆಯ ಹಿರಿಯ, ಸಹೋದರ, ಮಗ ರಾಜ್ಯವನ್ನಾಳುತ್ತಿದ್ದಾರೆ ಎಂಬ ಹೆಮ್ಮೆ ಕುರುಬರದ್ದಾಗಿತ್ತು. ಮನೆಯವರು ಏನೂ ಕೇಳಿದರೂ ಆ‌ಸಮಯಕ್ಕೆ ಊರಿನವರ ಉಸಾಬರಿಯ ಬಗ್ಗೆಯೇ ಮಾತನಾಡಿ ಸಮಾಧಾನ ಮಾಡಿ ಕಳುಹಿಸುತ್ತಿದ್ದ " ಊರಿಗೆ ಉಪಕಾರಿ".   ಆದರೂ ಚುನಾವಣೆಯ ಸಮಯದಲ್ಲಿ ಊರಿಗೆ ಉಪಕಾರಿಯಾಗಿದ್ದ ಸಿದ್ದರಾಮಯ್ಯ ನವರನ್ನು ಮರೆತ ಊರಿನವರು ತಂತ್ರ ಕುತಂತ್ರದಿಂದ ಸೋಲಿಸಿದರು. ನಮ್ಮ ಮನೆಯವರನ್ನು ಕುತಂತ್ರದಿಂದ ಸೋಲಿಸುತ್ತಿದ್ದಾರೆ ಎಂಬುದನ್ನು ಅರಿತ ಮನೆಯ ಗುರು - ಹಿರಿಯರು - ಯುವಕರಾದಿಯಾಗಿ ಊರಿನ ಉಪಕಾರಿಯ ಬೆಂಬಲಕ್ಕೆ ನಿಂತರು. ಇನ್ನೇನು ರಾಜಕೀಯ ಕ್ಷೇತ್ರದಲ್ಲಿ ಸೋಲಿನೊಂದಿಗೆ ವಿದಾಯ ಹೇಳುವ ಪರಿಸ್ಥಿತಿ ಬರುತ್ತಿದೆ ಎನ್ನುವಾಗ ಸಿದ್ದರಾಮಯ್ಯ ನವರ " ಕೈ" ಹಿಡಿದಿದ್ದು " ಮನೆಯವರು (ಕುರುಬರು)" ಈ ನಾಣ್ಣುಡಿಯನ್ನು ಅಂದು ಸಿದ್ದರಾಮಯ್ಯ ನವರ ತಂದೆಯವರು ಹೇಳುತ್ತಿದ್ದರೆಂದು ಹೇಳಕೊಂಡಿದ್ದಾರೆ. ಅವರ ತಂದೆಯವರ ಮಾತನ್ನು ಆಲಿಸಿ ಅರ್ಥ ಮಾಡಿಕೊಂಡು.. ಮನೆಗೂ (ಕುರುಬರು) ಒಳಿತನ್ನು ಮಾಡಿದ್ದಿದ್ದರೆ. ಮನೆಯವರು ಸಂತೋಷ ಪಡ...

ಕುರುಬರ ಇತಿಹಾಸ ತಿಳಿಯಿರಿ

ಕುರುಬರ ಇತಿಹಾಸ ಪರಂಪರೆ, ಭಾಗ ೨೮ ಹಾಲುಮತ ಹುಕ್ಕಬುಕ್ಕ ಸಾಂಸ್ಕೃತಿಕ ಪ್ರತಿಷ್ಠಾನ ಬಳ್ಳಾರಿ ಕುರುಭರು.. ನಾವು ಕುರುಭರು ಕುರುಭರು ಇಚ್ಚಿಸಿದ್ದಲ್ಲಿ ಅವರಿಗೆ ವೈಷ್ಣವ ದೀಕ್ಷೆ ನೀಡುತ್ತೇನೆ :-- ಪೇಜಾವರ ಶ್ರೀ ಪಾದರು , ಉಡುಪಿ ನಿಮ್ಮ ಯಾವ ದೀಕ್ಷೆಯೂ ನಮಗೆ ಬೇಕಾಗಿಲ್ಲ , ಕುರುಭರು ತಾಯಿ ಗರ್ಭದಲ್ಲಿ ಇರುವಾಗಲೇ ದೀಕ್ಷೆ ಪಡೆದವರು :- ಸಿದ್ದರಾಮಯ್ಯ , ಪ್ರಸ್ತುತ ಮುಖ್ಯಮಂತ್ರಿ ವಾಹ್..! ಎಂಥಾ ಮಾತು ಸಿದ್ದರಾಮಯ್ಯ.. ಅಂದು ನನಗೆ ಸಿದ್ದರಾಮಯ್ಯ ಬಹಳವೇ ಇಷ್ಟವಾದರು , ಮನುಷ್ಯ ತನ್ನ ಕುಲದ ಸತ್ ಸಂಪ್ರದಾಯ ಬಿಟ್ಟುಕೊಡಲಿಲ್ಲ ...! ಭೇಷ್ ಎನಿಸಿತು.  ಕುರುಭರ ಇತಿಹಾಸ ತಿಳಿಯಿರಿ. ಕುರುಭರು ಮೂಲತಃ ನಾಗಕುಲದವರು ಎನ್ನಿಸಿಕೊಳ್ಳುವರು , ಪಲ್ಲವರು ಎಂದು ಕರ್ನಾಟಕದಲ್ಲಿ , ಪೊಲಿಯಾರ್ / ಪೊಲಯರ್ ಎಂದು ಕೇರಳದಲ್ಲಿ ಪಲ್ಲಿಗ ಎಂದು ಮಹಾರಾಷ್ಟ್ರದಲ್ಲಿ , ಉತ್ತರ ಭಾರತದೆಡೆ ಹಟ್ಟಿಗಾರರೆಂದು ಗುರುತಿಸಲ್ಪಡುತ್ತಾರೆ‌. ಕುರುಭ ( ಕುರು - ಪರತತ್ವ ಭ - ಗಳಿಸುವವ) ಎಂಬ ದೀಕ್ಷಾ ಪದ್ದತಿ. ಕುರುಭ ಒಂದು ಸಿದ್ದ ಶೈವ ಶಾಖೆ. ಕುರುಭರು ಅರ್ಥಾತ್ ಪಲ್ಲವರು 5-7ನೇ ಶತಮಾನದಲ್ಲಿ ಲಿಂಗ ದರಿಸುತ್ತಿದ್ದರು ಎಂಬ ವಿವರ ಶಾಸನಗಳಲ್ಲಿ ಇದೆ. ಪಲ್ಲವರ ಸಹೋದರ ವಂಶಾವಳಿ ಛಲವಾದಿ ಚಾಳುಕ್ಯ ಮಾದಿಗರು (ಕುರುಭರಲ್ಲಿ ಸಾದರು) ಸಹ ಲಿಂಗದಾರಿಗಳಾಗಿದ್ದ ವಿವರವಿದೆ. 2ನೇ ಶತಮಾನದಲ್ಲಿ ಭಾರತದ ವಂಶಸ್ಥರು ಭಾರ ಕುಲದ ಮಾದಿಗರು ಭಾರಶಿವ ನೆಂಬ ರಾಜ ...

ಕುರುಬರಿಗೆ ಸಚಿವ ಸ್ಥಾನ ಕೊಡದಕ್ಕೆ ಹಾಲುಮತ ಮಹಾಸಭಾ ಆಕ್ರೋಶ

ಬೆಂಗಳೂರಿನಲ್ಲಿ  #ಹಾಲುಮತ‌_ಮಹಾಸಭಾ ಪ್ರತಿಭಟನೆ ಕುರುಬ ಸಮಾಜದಲ್ಲಿ ಹುಟ್ಟಿರುವ ಸಾಮಾನ್ಯ ಜನರಲ್ಲಿರುವ ಅಭಿಮಾನ, ನೋವು ಆಯ್ಕೆಯಾಗಿರುವ ಶಾಸಕರಲ್ಲಿ‌ ಕಾಣೆಯಾಗಿದೆ.  ಕಾಂಗ್ರೇಸ್ ನ  8 ಜನ ಶಾಸಕರು, 3 ಎಂ.ಎಲ್.ಸಿ. ಗಳು ಒಂದೆಡೆ ಕೂತು ಸಭೆ ಸೇರಿ, ಕುರುಬ ಸಮಾಜಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಿ. #ನಮ್ಮಲ್ಲಿ_ಯಾರೇ_ಗೆದ್ದರೂ_ನಾವೇ_ಗೆದ್ದಂತೆ.. #ನಮ್ಮ_ಯಾರಿಗೇ_ನೀಡಿದರೂ_ನಮಗೇ‌_ನೀಡಿದಂತೆ.." ಅನ್ನೋ ಮನೋಭಾವನೆಯಿಂದ ಸಮಾಜಕ್ಕೂ ಕೆಪಿಸಿಸಿಗೂ ಎಐಸಿಸಿಗೂ ಸ್ಪಷ್ಟ ಸಂದೇಶ ಕಳುಹಿಸುವುದನ್ನು ಬಿಟ್ಟು ಅವರ ಮೇಲೆ ಇವರು ಇವರ ಮೇಲೆ‌ಅವರು ಬಹಿರಂಗವಾಗಿ ಟಿವಿ ಚಾನೆಲಗಳ‌ ಮುಂದೆ ಹೇಳಿಕೆ ನೀಡುತ್ತಿರುವುದು ಕುರುಬ ಸಮಾಜದ ಒಗ್ಗಟ್ಟನ್ನು ತೋರಿಸುತ್ತಿದೆ. ಕುರುಬರಿಗೆ ಅನ್ಯಾಯವಾದಾಗ, ಕುರುಬರ ಬೇಡಿಕೆಗಳಿಗೆ ಸ್ಪಂದನೆ ಮಾಡಿ ಎಂದು ಕೇಳಿದಾಗ, ಸಮಾಧಾನಮಾಡಿ ಕಳುಹಿಸುತ್ತಿದ್ದ ಜನ ಪ್ರತಿನಿಧಿಗಳಿಗೆ ಅನ್ಯಾಯವಾಗುತ್ತಿದೆ ಎಂದಾಗ. ಕರ್ನಾಟಕ ರಾಜ್ಯದ್ಯಂತ ಕುರುಬ ಸಮಾಜ, ಹಾಲುಮತ ಮಹಾಸಭಾ ಮತ್ತು ಕುರುಬ ಸಂಘಟನೆಗಳು ಬೀದಿಗಳಿದು ಪ್ರತಿಭಟನೆ ಮಾಡುತ್ತಿವೆ. ಇನ್ನು ಮುಂದಾದರೂ ಶಾಸಕರು ಎಂಎಲ್.ಸಿಗಳು ಒಂದು ಕೂತು ಒಂದು ನಿರ್ಧಾರ ಮಾಡಿ ಯಾರಿಗಾದ್ರೂ ಸಚಿವ ಸ್ಥಾನ ನೀಡಲಿ ನಮ್ಮವರಿಗೆ ನೀಡಿದ್ದಾರೆ ಅನ್ನೋ ತೃಪ್ತಿ ಇರಲಿ. ಒಗ್ಗೂಡುವ ಸಮಯದಲ್ಲಿ ಒಗ್ಗೂಡಿ.. ಕಿತ್ತಾಟ, ಕಚ್ಚಾಟ ಗಳು ಏನೇ ಇದ್ದರೂ ನಾಲ್ಕು ಗೋಡೆಗಳ ಮಧ್ಯ...

ಕುರುಬರ ಮನೆಯ ಹೆಣ್ಣು ಮಗಳು ಕಾಯಕಮಾತೆ ಇಟಗಿ ಭಿಮಾಂಬಿಕೆ

ಕುರುಬ ಸಮಾಜದ ಇಟಗಿ ಶ್ರೀ ಭೀಮಾಂಬಿಕೆ ಬಗ್ಗೆ ತಪ್ಪದೆ ಎಲ್ಲ ಕುಲಬಾಂಧವರು ತಿಳಿದುಕೊಳ್ಳಿ. #ಓದಿ #ಹಾಗೆ #ಷೇರ್_ಮಾಡಿ ಗದಗ ಜಿಲ್ಲೆ ರೋಣ ತಾಲೂಕ ಇಟಗಿ ಶ್ರೀ ಭೀಮಾಂಬಿಕೆ ಕರ್ತೃ ಗದ್ದಿಗೆ. ಇಂದು ಇಷ್ಟಾರ್ಥ ಸಿದ್ದತಾಣವಾಗಿದೆ. ಶಿವಶರಣೆಯಾಗಿ ಆ ಪರಮಭಕ್ತರನ್ನು ಗಳಿಸಿ ಅನೇಕರ ಮನೆ ಮನ ಪರಿವರ್ತನೆ ಮಾಡಿದ ಮಹಾಮಾತೆ. ಬಾಲ್ಯದಲ್ಲಿ ಇಟಗಿ ಭೀಮಪ್ಪ ಕಲಿತಿರಲಿಲ್ಲ. ಅದಕ್ಕೆ ಆಕೆಯಲ್ಲಿ ಚಿಂತೆಯು ಇರಲಿಲ್ಲ. ಭೀಮವ್ವ ಅವರ ಸಾಧನೆ ಬದುಕಿನುದ್ದಕ್ಕೂ ಆಧ್ಯಾತ್ಮಿಕ ಸಾಧನೆಯಾಗಿತ್ತು. ಭೀಮಮ್ಮ ತನ್ನ ಜನಿಸಿದ ಗ್ರಾಮ ಬಿಟ್ಟು ಯಾವ ಗುರುವಿನ ಅನುಹ ಪಡೆಯಲು ಹೋದವಳಲ್ಲ. ಆಧ್ಯಾತ್ಮಧರ್ಮಗಳನ್ನು ಗುರುವೆಂದು ನಂಬಿ ಬಡವರ ಆಶ್ರಯ ಬಯಸಿ ಬರುವವರ ಸಂಕಷ್ಟಗಳಿಂದ ಪಾರಾಗಲು ಬಯಸುವವರು ತಮ್ಮಲ್ಲಿ ಯಾರೇ ಬಂದರೂ ಅವರ ಕಣ್ಣೀರು ಒರಿಸಿ ಸಾಂತ್ವನ ಹೇಳಿ ಆತ್ಮಸ್ಥೈರ್ಯ ತುಂಬಿ ಮೆರೆದ ಧೀಮಂತ ಸಾಧ್ವಿಮಣಿ. ಇಟಗಿ ಶ್ರೀ ಭೀಮಾಂಬಿಕೆ ಹಾಲುಮತ ಕೃಷಿಕ ಕುಟುಂಬದಲ್ಲಿ ಜನಿಸಿದಳು. ಸಂಸಾರಿಕಾಶ್ರಮ ಸ್ವೀಕರಿಸಿದರು. ತಮ್ಮ ಆಧ್ಯಾತ್ಮಿಕ ಶಕ್ತಿಯಿಂದ ಅನೇಕ ಸಂಸಾರಗಳಿಗೆ ಆಶ್ರಯವಾದರು. ಅನ್ನದಾಸೋಹವವನ್ನಿಟ್ಟು ಮಹಾ ದಾಸೋಹಿಯನಿಸಿದವಳು. ಆ ಮಹಾಮಾತೆ ಇಟಗಿ ಶ್ರೀ ಭೀಮಮ್ಮನವರ ಜಾತ್ರಾ ಮಹೋತ್ಸವವು ಪ್ರತಿವರ್ಷ ನೆರವೇರುತ್ತದೆ. ಈ ವರ್ಷವು ಪ್ರತಿವರ್ಷದಂತೆ ಮಹಾ ದಾಸೋಗಿ ಶ್ರೀ ಭೀಮಾಂಬಿಕೆ ದೇವಿಯ ಜಾತ್ರಮಹೋತ್ಸವ ನವಂಬರ ೪ ರಿಂದ ೮ರ ವರೆಗೆ ಸಡಗರದಿಂದ ನೆರವೇರುತ್ತದೆ. ಉತ್ಸವದ ...

ಹಾಲುಮತ ಮಹಾಸಭಾ ಇದು ಕುರುಬರ ಧ್ವನಿ

ಬೆಂಗಳೂರಿನಲ್ಲಿ  #ಹಾಲುಮತ‌_ಮಹಾಸಭಾ ಪ್ರತಿಭಟನೆ ಕುರುಬ ಸಮಾಜದಲ್ಲಿ ಹುಟ್ಟಿರುವ ಸಾಮಾನ್ಯ ಜನರಲ್ಲಿರುವ ಅಭಿಮಾನ, ನೋವು ಆಯ್ಕೆಯಾಗಿರುವ ಶಾಸಕರಲ್ಲಿ‌ ಕಾಣೆಯಾಗಿದೆ.  ಕಾಂಗ್ರೇಸ್ ನ  8 ಜನ ಶಾಸಕರು, 3 ಎಂ.ಎಲ್.ಸಿ. ಗಳು ಒಂದೆಡೆ ಕೂತು ಸಭೆ ಸೇರಿ, ಕುರುಬ ಸಮಾಜಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಿ. #ನಮ್ಮಲ್ಲಿ_ಯಾರೇ_ಗೆದ್ದರೂ_ನಾವೇ_ಗೆದ್ದಂತೆ.. #ನಮ್ಮ_ಯಾರಿಗೇ_ನೀಡಿದರೂ_ನಮಗೇ‌_ನೀಡಿದಂತೆ.." ಅನ್ನೋ ಮನೋಭಾವನೆಯಿಂದ ಸಮಾಜಕ್ಕೂ ಕೆಪಿಸಿಸಿಗೂ ಎಐಸಿಸಿಗೂ ಸ್ಪಷ್ಟ ಸಂದೇಶ ಕಳುಹಿಸುವುದನ್ನು ಬಿಟ್ಟು ಅವರ ಮೇಲೆ ಇವರು ಇವರ ಮೇಲೆ‌ಅವರು ಬಹಿರಂಗವಾಗಿ ಟಿವಿ ಚಾನೆಲಗಳ‌ ಮುಂದೆ ಹೇಳಿಕೆ ನೀಡುತ್ತಿರುವುದು ಕುರುಬ ಸಮಾಜದ ಒಗ್ಗಟ್ಟನ್ನು ತೋರಿಸುತ್ತಿದೆ. ಕುರುಬರಿಗೆ ಅನ್ಯಾಯವಾದಾಗ, ಕುರುಬರ ಬೇಡಿಕೆಗಳಿಗೆ ಸ್ಪಂದನೆ ಮಾಡಿ ಎಂದು ಕೇಳಿದಾಗ, ಸಮಾಧಾನಮಾಡಿ ಕಳುಹಿಸುತ್ತಿದ್ದ ಜನ ಪ್ರತಿನಿಧಿಗಳಿಗೆ ಅನ್ಯಾಯವಾಗುತ್ತಿದೆ ಎಂದಾಗ. ಕರ್ನಾಟಕ ರಾಜ್ಯದ್ಯಂತ ಕುರುಬ ಸಮಾಜ, ಹಾಲುಮತ ಮಹಾಸಭಾ ಮತ್ತು ಕುರುಬ ಸಂಘಟನೆಗಳು ಬೀದಿಗಳಿದು ಪ್ರತಿಭಟನೆ ಮಾಡುತ್ತಿವೆ. ಇನ್ನು ಮುಂದಾದರೂ ಶಾಸಕರು ಎಂಎಲ್.ಸಿಗಳು ಒಂದು ಕೂತು ಒಂದು ನಿರ್ಧಾರ ಮಾಡಿ ಯಾರಿಗಾದ್ರೂ ಸಚಿವ ಸ್ಥಾನ ನೀಡಲಿ ನಮ್ಮವರಿಗೆ ನೀಡಿದ್ದಾರೆ ಅನ್ನೋ ತೃಪ್ತಿ ಇರಲಿ. ಒಗ್ಗೂಡುವ ಸಮಯದಲ್ಲಿ ಒಗ್ಗೂಡಿ.. ಕಿತ್ತಾಟ, ಕಚ್ಚಾಟ ಗಳು ಏನೇ ಇದ್ದರೂ ನಾಲ್ಕು ಗೋಡೆಗಳ ಮಧ್ಯ...

ಕುರುಬ ಸಮಾಜದ ಶಾಸಕರುಗಳೇ ಮೊದಲು ನೀವು ಒಗ್ಗಟ್ಟಾಗಿ

ಕುರುಬ ಸಮಾಜದ ಶಾಸಕರುಗಳೇ  ಮೊದಲು ನೀವು ಒಗ್ಗಟ್ಟಾಗಿ, ------------------------------------------------------------------ ಕುರುಬ ಸಮಾಜದಲ್ಲಿ ಹುಟ್ಟಿರುವ ಸಾಮಾನ್ಯ ಜನರಲ್ಲಿರುವ ಅಭಿಮಾನ, ನೋವು ಆಯ್ಕೆಯಾಗಿರುವ ಶಾಸಕರಲ್ಲಿ‌ ಕಾಣೆಯಾಗಿದೆ. ಕಾಂಗ್ರೇಸ್ ನ 8 ಜನ ಶಾಸಕರು, 3 ಎಂ.ಎಲ್.ಸಿ. ಗಳು ಒಂದೆಡೆ ಕೂತು ಸಭೆ ಸೇರಿ, ಕುರುಬ ಸಮಾಜಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಿ. " ನಮ್ಮಲ್ಲಿ ಯಾರೇ ಗೆದ್ದರೂ ನಾವೇ ಗೆದ್ದಂತೆ.. ನಮ್ಮ ಯಾರಿಗೇ ನೀಡಿದರೂ ನಮಗೇ‌ನೀಡಿದಂತೆ.." ಅನ್ನೋ ಮನೋಭಾವನೆಯಿಂದ ಸಮಾಜಕ್ಕೂ ಕೆಪಿಸಿಸಿಗೂ ಎಐಸಿಸಿಗೂ ಸ್ಪಷ್ಟ ಸಂದೇಶ ಕಳುಹಿಸುವುದನ್ನು ಬಿಟ್ಟು ಅವರ ಮೇಲೆ ಇವರು ಇವರ ಮೇಲೆ‌ಅವರು ಬಹಿರಂಗವಾಗಿ ಟಿವಿ ಚಾನೆಲಗಳ‌ ಮುಂದೆ ಹೇಳಿಕೆ ನೀಡುತ್ತಿರುವುದು ಕುರುಬ ಸಮಾಜದ ಒಗ್ಗಟ್ಟನ್ನು ತೋರಿಸುತ್ತಿದೆ. ಕುರುಬರಿಗೆ ಅನ್ಯಾಯವಾದಾಗ, ಕುರುಬರ ಬೇಡಿಕೆಗಳಿಗೆ ಸ್ಪಂದನೆ ಮಾಡಿ ಎಂದು ಕೇಳಿದಾಗ, ಸಮಾಧಾನಮಾಡಿ ಕಳುಹಿಸುತ್ತಿದ್ದ ಜನ ಪ್ರತಿನಿಧಿಗಳಿಗೆ ಅನ್ಯಾಯವಾಗುತ್ತಿದೆ ಎಂದಾಗ. ಕರ್ನಾಟಕ ರಾಜ್ಯದ್ಯಂತ ಕುರುಬ ಸಮಾಜ, ಹಾಲುಮತ ಮಹಾಸಭಾ ಮತ್ತು ಕುರುಬ ಸಂಘಟನೆಗಳು ಬೀದಿಗಳಿದು ಪ್ರತಿಭಟನೆ ಮಾಡುತ್ತಿವೆ. ಇನ್ನು ಮುಂದಾದರೂ ಶಾಸಕರು ಎಂಎಲ್.ಸಿಗಳು ಒಂದು ಕೂತು ಒಂದು ನಿರ್ಧಾರ ಮಾಡಿ ಯಾರಿಗಾದ್ರೂ ಸಚಿವ ಸ್ಥಾನ ನೀಡಲಿ ನಮ್ಮವರಿಗೆ ನೀಡಿದ್ದಾರೆ ಅನ್ನೋ ತೃಪ್ತಿ ಇರಲಿ. ಒಗ್ಗೂಡುವ ಸಮಯದಲ...