Skip to main content

ಕಷ್ಟದ ಕಾಲದಲ್ಲೂ ನಿಮ್ಮ ಕೈ ಹಿಡಿದ ಕುರುಬರ ಕಡೆ ಗಮನ ಕೊಡಿ ಸಿದ್ದರಾಮಯ್ಯರವರೆ

"ಮನೆಗೆ ಮಾರಿ.. ಊರಿಗೆ ಉಪಕಾರಿ" ಸಿದ್ದರಾಮಯ್ಯ ನವರನ್ನು ಕೈ ಹಿಡಿದಿದ್ದು ಮನೆಯವರು (ಕುರುಬರು) ಊರಿ ನವರು ಕೇಳದೇ ಇದ್ರೂ ಘೋಷಣೆ ಮಾಡಿ ಭಾಗ್ಯಗಳನ್ನು ನೀಡಿದ ಸಿದ್ದರಾಮಯ್ಯ ನವರಿಗೆ       ಮುಸ್ಸಂಜೆಯಲ್ಲಿ...ಊರಿನವರು ಕೊಟ್ಟಿದ್ದು "ಕೈ".     ಐದು ವರ್ಷಗಳ  ಕಾಲ ನಮ್ಮ‌ ಮನೆಯ ಹಿರಿಯ, ಸಹೋದರ, ಮಗ ರಾಜ್ಯವನ್ನಾಳುತ್ತಿದ್ದಾರೆ ಎಂಬ ಹೆಮ್ಮೆ ಕುರುಬರದ್ದಾಗಿತ್ತು. ಮನೆಯವರು ಏನೂ ಕೇಳಿದರೂ ಆ‌ಸಮಯಕ್ಕೆ ಊರಿನವರ ಉಸಾಬರಿಯ ಬಗ್ಗೆಯೇ ಮಾತನಾಡಿ ಸಮಾಧಾನ ಮಾಡಿ ಕಳುಹಿಸುತ್ತಿದ್ದ " ಊರಿಗೆ ಉಪಕಾರಿ".   ಆದರೂ ಚುನಾವಣೆಯ ಸಮಯದಲ್ಲಿ ಊರಿಗೆ ಉಪಕಾರಿಯಾಗಿದ್ದ ಸಿದ್ದರಾಮಯ್ಯ ನವರನ್ನು ಮರೆತ ಊರಿನವರು ತಂತ್ರ ಕುತಂತ್ರದಿಂದ ಸೋಲಿಸಿದರು. ನಮ್ಮ ಮನೆಯವರನ್ನು ಕುತಂತ್ರದಿಂದ ಸೋಲಿಸುತ್ತಿದ್ದಾರೆ ಎಂಬುದನ್ನು ಅರಿತ ಮನೆಯ ಗುರು - ಹಿರಿಯರು - ಯುವಕರಾದಿಯಾಗಿ ಊರಿನ ಉಪಕಾರಿಯ ಬೆಂಬಲಕ್ಕೆ ನಿಂತರು. ಇನ್ನೇನು ರಾಜಕೀಯ ಕ್ಷೇತ್ರದಲ್ಲಿ ಸೋಲಿನೊಂದಿಗೆ ವಿದಾಯ ಹೇಳುವ ಪರಿಸ್ಥಿತಿ ಬರುತ್ತಿದೆ ಎನ್ನುವಾಗ ಸಿದ್ದರಾಮಯ್ಯ ನವರ " ಕೈ" ಹಿಡಿದಿದ್ದು " ಮನೆಯವರು (ಕುರುಬರು)" ಈ ನಾಣ್ಣುಡಿಯನ್ನು ಅಂದು ಸಿದ್ದರಾಮಯ್ಯ ನವರ ತಂದೆಯವರು ಹೇಳುತ್ತಿದ್ದರೆಂದು ಹೇಳಕೊಂಡಿದ್ದಾರೆ. ಅವರ ತಂದೆಯವರ ಮಾತನ್ನು ಆಲಿಸಿ ಅರ್ಥ ಮಾಡಿಕೊಂಡು.. ಮನೆಗೂ (ಕುರುಬರು) ಒಳಿತನ್ನು ಮಾಡಿದ್ದಿದ್ದರೆ. ಮನೆಯವರು ಸಂತೋಷ ಪಡುತ್ತಿದ್ದರು. ಸಾರ್ಥಕವೂ ಆಗುತ್ತಿತ್ತು. ಊರಿನವರು ಸರಿಯಾದ ಸಮಯದಲ್ಲಿ ಕೈ ಕೊಟ್ಟಿದ್ದರೂ,ಅದರ ಬಗ್ಗೆ ಅರಿವಿದ್ದರೂ ಸಹ ಈಗಲೂ ಮನೆಯವರ ಬಗ್ಗೆ ಕಾಳಜಿ ತೋರಿಸದೇ ಇದ್ರೆ ಹೇಗೆ ? ಈಗ ಅಧಿಕಾರದ ಗದ್ದುಗೆಯ ಮೇಲೆ ಕುಳಿತಿರುವವರ ಮನೆಯವರನ್ನು ನೋಡಲಿ.  10 ಜನರನ್ನು ತನ್ನ ಮನೆಯವರನ್ನೇ ತಮ್ಮ ಸುತ್ತಲೂ ಇಟ್ಟುಕೊಂಡು ಪೋಷಿಸುತ್ತಿದ್ದಾರೆ. ಹಿಂದೆಯೂ ಸಹ ಆಡಳಿತ ನಡೆಸಿದ ಮನೆಯವರು ಸಹ. 14 ಜನ ತನ್ನ ಮನೆಯವರು ಸಂಬಂಧಿಕರನ್ನು ಸುತ್ತಮುತ್ತಲು, ತನ್ನೊಟ್ಟಿಗೆ ಇಟ್ಟುಕೊಂಡು.. ತನ್ನ ಮನೆ ( ಅವರ ಜಾತಿ) ತನ್ನ ಗುಡಿ ಗುಡಾರಗಳನ್ನು (ಮಠ) ಬೆಳೆಸಿದ್ದರು. ಸಿದ್ದರಾಮಯ್ಯ ನವರ ತಂದೆ ಅಂದು ಹೇಳಿದ್ದರು ಅದನ್ನು ಅಂದು ಅರ್ಥ ಮಾಡಿಕೊಳ್ಳುವ ಪ್ರಯತ್ನವನ್ನೂ ಮಾಡಿಲ್ಲ.. "ಸೋರುತಿಹದು ಮನೆಯ ಮಾಳಿಗಿ.." ಎಂಬುದನ್ನು ಮನವರಿಕೆ ಮಾಡಿಕೊಡಲು ಮುಂದಾಗಿರುವ ಮನೆಯವರು, ಮನೆಯ ಗುಂಪುಗಳು ( ಸಂಘ ಸಂಸ್ಥೆಗಳು) ಗುರುಗಳೇ ನೇರವಾಗಿ ಹೇಳಿದರೂ ಈಗಲೂ ಅರಿತುಕೊಳ್ಳದೇ.. ಮತ್ತದೇ ಊರಿಗೆ ಉಪಕಾರಿಯಾಗುತ್ತೇನೆ ಎಂದು ಹೊರಟವರ ಮುಂದೆ ಮನೆಯವರು ಏನು ಹೇಳಿದರೂ ಪ್ರಯೋಜನ ಇಲ್ಲ ಅನ್ನಿಸುತ್ತೆ. ಮನೆಯವರ ದೌರ್ಭಾಗ್ಯ ಎಂದುಕೊಂಡು.. ಪಾಲಿಗೆ ಬಂದಿದ್ದನ್ನು ಅನುಭವಿಸುತ್ತಾ ಮುಂದೆ ಸಾಗುವುದೊಂದೇ ದಾರಿ...ಹಾಲುಮತ ಮಹಾಸಭಾ  ಮನೆಯ (ಕುರುಬರ) ಪರವಾಗಿ ಮನೆಯೊಡಯನ ಮುಂದೆ ವಿನಂತಿ ಮಾಡಿಕೊಳ್ಳುತ್ತಿದೆ. ಸಿದ್ದರಾಮಯ್ಯ ನವರೇ... ರಾಜಕೀಯ ಕ್ಷೇತ್ರದಲ್ಲಿ ಅಂದು ನಿಮ್ಮ‌ನ್ನು ಕೈ ಹಿಡಿದಿದ್ದು ನಿಮ್ಮದೇ ಕುರುಬ ಸಮಾಜ. ಅಂದು ದೊಡ್ಡ ಸಮಾಜ ನಿಮ್ಮ‌ಹಿಂದಿದೆ ಎಂಬ ಕಾರಣಕ್ಕೆ ಕಾಂಗ್ರೆಸ್ ಪಕ್ಷ  ಮುಖ್ಯಮಂತ್ರಿಯನ್ನಾಗಿಸಿದ್ದು. ಆ ಪಕ್ಷದ ನಂಬಿಕೆಯನ್ನು ನಿಮ್ಮ‌ಮನೆಯ ವರು  (ಕುರುಬರು) ಹುಸಿಗೊಳಿಸಲಿಲ್ಲ. ಪಕ್ಷ ಬೇಧ ಮರೆತು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದರು. ಅಂದು ಬೆಂಬಲಿಸಿದ್ದರು. ನಿನ್ನೆಯೂ ಸಹ ಬೆಂಬಲಕ್ಕೆ ನಿಂತರು. ಊರಿಗೆ ಉಪಕಾರಿಯಾಗಿದ್ದ ಸಿದ್ದರಾಮಯ್ಯ ನವರನ್ನು  ಚಾಮುಂಡೇಶ್ವರಿ ಯಲ್ಲಿ ಸೋಲಿಸಿದರು. ಆದರೆ ಮನೆಯವರು ಬದಾಮಿಯಲ್ಲಿ ಒಗ್ಗಟ್ಟಿನಿಂದ ಗೆಲ್ಲಿಸಿದರು. ಈಗಲಾದ್ರೂ ಮನೆಯ ಕಡೆ ಗಮನ ಕೊಡಿ. ಮನೆಗೂ ಉಪಕಾರಿಯಾಗಿ ಎಂದು ಕರ್ನಾಟಕದಲ್ಲಿರುವ ನಿಮ್ಮ (ಕುರುಬರು) ಮನೆಯವರು ಕೇಳಿಕೊಳ್ಳುತ್ತಿದ್ದಾರೆ.

#ರಾಜು ಮೌರ್ಯ ದಾವಣಗೆರೆ 

Comments

Popular posts from this blog

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜೀವನ ಚರಿತ್ರೆಯನ್ನೊಮ್ಮೆ ಓದಿ

ಸಂಗೊಳ್ಳಿ ರಾಯಣ್ಣ  –  ಬ್ರಿಟಿಷರ  ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರಲ್ಲೊಬ್ಬ.  ಕಿತ್ತೂರು ಚೆನ್ನಮ್ಮಳ  ಬಲಗೈ ಬಂಟನಾದವನು ಸಂಗೊಳ್ಳಿ ರಾಯಣ್ಣ. ಪರಿಚಯ ಸಂಪಾದಿಸಿ ಬೆಳಗಾವಿ  ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿರುವ ನೇಗಿನಹಾಳ ಗ್ರಾಮವು ಕೆಂಚವ್ವನ ತವರು ಮನೆಯಾಗಿದ್ದರು ಸಂಗೊಳ್ಳಿಯು ರಾಯಣ್ಣನ ಜನ್ಮಸ್ಥಳ ಹಾಗೂ ಹೋರಾಟದ ಭೂಮಿಯಾಗಿದೆ. ಚೆನಮ್ಮಳ ಆಸ್ತಾನದಲ್ಲಿ ವಾಲಿಕರ್ ವೃತ್ತಿ ಮಾಡುವ ಕುರುಬ ಮನೆತನದವನಾಗಿದ್ದ ರಾಯಣ್ಣನನ್ನು ಜನ, ರಾಯಾ ಎಂದು ಕರೆಯುತ್ತಿದರು. ಅಷ್ಠೆ ಅಲ್ಲದೆ ಈತನು ಗೇರಿಲ್ಲಾ ತಂತ್ರದ ರೂವಾರಿಯಾಗಿದ್ದನು.  ಬ್ರಿಟಿಷರ  ವಿರುದ್ಧದ ಯುದ್ಧದಲ್ಲಿ ಚನ್ನಮ್ಮ ಹಾಗು ರಾಯಣ್ಣ ಇಬ್ಬರೂ ಸೆರೆಯಾಳಾದರು.  ಬ್ರಿಟಿಷರು ಚನ್ನಮ್ಮನನ್ನು  ಬೈಲಹೊಂಗಲದಲ್ಲಿ  ಸೆರೆಯಲ್ಲಿಟ್ಟರು. ಸಂಗೊಳ್ಳಿ ರಾಯಣ್ಣನನ್ನು ಬ೦ಧಿಸಿ ನ೦ದಗಡ ದಲ್ಲಿ ಗಲ್ಲಿಗೆರಿಸಿದರು.  ಜನವರಿ ೨೬  ೧೮೩೧ರಂದು ಗಲ್ಲಿ ಗೇರಿಸಿದರು. ಸಂಗೊಳ್ಳಿ ರಾಯಣ್ಣ ಜನಿಸಿದ ದಿನಾಂಕವಾದ  ಆಗಸ್ಟ್ ೧೫  ೧೭೯೮ ,  ಭಾರತಕ್ಕೆ  ಸ್ವಾತಂತ್ರ್ಯ ದೊರೆತ ದಿನಾಂಕವಾದರೆ, ಆತ ಗಲ್ಲಿಗೇರಿದ ದಿನಾಂಕ  ಜನವರಿ ೨೬ , ಭಾರತವು  ಗಣರಾಜ್ಯವೆಂದು  ಘೋಷಿಸಿದ ದಿನಾಂಕವಾಗಿದೆ. ರಾಯಣ್ಣನ ಉಕ್ತಿ, “ನನ್ನ ಕೊನೆ ಆಸೆ ಏನೆಂದರೆ, ಮತ್ತೆ ನಾನು ಈ ದೇಶದಲ್ಲಿ...

ಕುರುಬರು ಭಾರತದ ಇತಿಹಾಸದ ಮೊದಲ ಸಾಮ್ರಾಜ್ಯವಾದ ಮೌರ್ಯ ಸಾಮ್ರಾಜ್ಯವನ್ನು ಕಟ್ಟಿದವರು.

ಕುರುಬ ಒಂದು ಹಿಂದು ಸಮುದಾಯದ ಹೆಸರು. ಕುರುಬ ಎಂದರೆ ಹುಡುಕುವ ಅಥವ ಪಡೆಯುವ ಎಂದು ಅರ್ಥ ಬರುತ್ತದೆ. ಉದಾಹರಣೆ: ಜೇನು ಕುರುಬ ಜಾತಿ ಎಂದರೆ ಜೇನು ಹುಡುಕುವ ಜಾತಿ. ಕುರುಬರು ಹಾಲುಮತ ಅನುಯಾಯಿಗಳು. ಕುರುಬ ಎಂದರೆ ಜ್ಞಾನವನ್ನು(ಭ) ಹುಡುಕುವವನು (ಕುರು) ಎಂಬ ದಾರ್ಮಿಕ ಅರ್ಥವು ಇದೆ. ಕುರುಬ ಜಾತಿಯು ಅತಿ ಪುರಾತನವಾದ ಜಾತಿ.  ಇತಿಹಾಸ ಪೂರ್ವ ಕುರುಬ ಜನಾಂಗ ತುಂಬಾ ಪುರಾತನವಾದ ಜನಾಂಗ , ರಾಮಾಯಣ ಮತ್ತು ಮಹಾಭಾರತ ಕಾಲದಲ್ಲಿ ಕುರು ವಂಶ ಮತ್ತು ಯದು ವಂಶಗಳ ಪ್ರಸ್ತಾವನೆಯಾಗಿದೆ. ಮಾನವನು ಮೊದಲು ಕಾಡುಗಳಲ್ಲಿ ಬೇಟೆ ಆಡಿ ಮತ್ತು ಅಲೀದು ಗೆಡ್ಡೆ, ಗೆಣಸು ತಿನ್ನುತಿದ್ದ , ಕ್ರಮೇಣ ಅವನು ಪ್ರಾಣಿಗಳನ್ನು ಪಳಗಿಸಿ ಸಾಕ ತೊಡಗಿದ, ಆ ನಂತರ ಅವನು ವ್ಯವಸಾಯ ಮಾಡುವದನ್ನು ಕಲಿತ, ನಂತರ ಅವನು ಹಳ್ಳಿಗಳಲ್ಲಿ ವಾಸಿಸ ತೊಡಗಿದ. ಕುರುಬರು ಈ ಎಲ್ಲ ಮಾನವನ ಆಯಾಮಗಳನ್ನು ದಾಟಿದವರು. ಅತಿ ಪುರಾತನವಾದ ಈ ಸಮುದಾಯದಿಂದ ಕಾಲ ಕ್ರಮೇಣ ಇತರೆ ಜನಾಂಗದವರು ಬೇರೆಯಾಗ ತೊಡಗಿದರು. ಉದಾಹರಣೆಗೆ ವಕ್ಕಲುತನ ಮಾಡುವನು ವಕ್ಕಲಿಗನಾದ, ಬೇಟೆಯಾಡು ವವನು ಬೇಡನಾದ , ಮಡಿಕೆ ಮಾಡುವವನು ಕುಂಬಾರನಾದ , ಈ ಇತರೆ ಜನಾಂಗದವರು ಮಾನವನ ಬೇಡಿಕೆಗಳಿಗೆ ಅನುಗುಣವಾಗಿ ತಮ್ಮ ವೃತ್ತಿಗಳನು ಮಾಡತೊಡಗಿದರು. ಹೀಗೆ ಪುರಾತನವಾದ ಕುರುಬ ಮತ್ತು ಯಾದವ ವಂಶಗಳಿಂದ ಸಣ್ಣ ಪುಟ್ಟ ಜಾತಿಗಳು ಹುಟ್ಟಿಕೊಂಡವು. ಭಾರತ ಇತಿಹಾಸ . ಕುರುಬರು ಭಾರತದ ಇತಿಹಾಸದ ಮೊದಲ ಸಾಮ್ರಾಜ್ಯವಾದ ಮೌರ್ಯ...

ಕುರುಬರ ಇತಿಹಾಸ ತಿಳಿಯಿರಿ

ಕುರುಬರ ಇತಿಹಾಸ ಪರಂಪರೆ, ಭಾಗ ೨೮ ಹಾಲುಮತ ಹುಕ್ಕಬುಕ್ಕ ಸಾಂಸ್ಕೃತಿಕ ಪ್ರತಿಷ್ಠಾನ ಬಳ್ಳಾರಿ ಕುರುಭರು.. ನಾವು ಕುರುಭರು ಕುರುಭರು ಇಚ್ಚಿಸಿದ್ದಲ್ಲಿ ಅವರಿಗೆ ವೈಷ್ಣವ ದೀಕ್ಷೆ ನೀಡುತ್ತೇನೆ :-- ಪೇಜಾವರ ಶ್ರೀ ಪಾದರು , ಉಡುಪಿ ನಿಮ್ಮ ಯಾವ ದೀಕ್ಷೆಯೂ ನಮಗೆ ಬೇಕಾಗಿಲ್ಲ , ಕುರುಭರು ತಾಯಿ ಗರ್ಭದಲ್ಲಿ ಇರುವಾಗಲೇ ದೀಕ್ಷೆ ಪಡೆದವರು :- ಸಿದ್ದರಾಮಯ್ಯ , ಪ್ರಸ್ತುತ ಮುಖ್ಯಮಂತ್ರಿ ವಾಹ್..! ಎಂಥಾ ಮಾತು ಸಿದ್ದರಾಮಯ್ಯ.. ಅಂದು ನನಗೆ ಸಿದ್ದರಾಮಯ್ಯ ಬಹಳವೇ ಇಷ್ಟವಾದರು , ಮನುಷ್ಯ ತನ್ನ ಕುಲದ ಸತ್ ಸಂಪ್ರದಾಯ ಬಿಟ್ಟುಕೊಡಲಿಲ್ಲ ...! ಭೇಷ್ ಎನಿಸಿತು.  ಕುರುಭರ ಇತಿಹಾಸ ತಿಳಿಯಿರಿ. ಕುರುಭರು ಮೂಲತಃ ನಾಗಕುಲದವರು ಎನ್ನಿಸಿಕೊಳ್ಳುವರು , ಪಲ್ಲವರು ಎಂದು ಕರ್ನಾಟಕದಲ್ಲಿ , ಪೊಲಿಯಾರ್ / ಪೊಲಯರ್ ಎಂದು ಕೇರಳದಲ್ಲಿ ಪಲ್ಲಿಗ ಎಂದು ಮಹಾರಾಷ್ಟ್ರದಲ್ಲಿ , ಉತ್ತರ ಭಾರತದೆಡೆ ಹಟ್ಟಿಗಾರರೆಂದು ಗುರುತಿಸಲ್ಪಡುತ್ತಾರೆ‌. ಕುರುಭ ( ಕುರು - ಪರತತ್ವ ಭ - ಗಳಿಸುವವ) ಎಂಬ ದೀಕ್ಷಾ ಪದ್ದತಿ. ಕುರುಭ ಒಂದು ಸಿದ್ದ ಶೈವ ಶಾಖೆ. ಕುರುಭರು ಅರ್ಥಾತ್ ಪಲ್ಲವರು 5-7ನೇ ಶತಮಾನದಲ್ಲಿ ಲಿಂಗ ದರಿಸುತ್ತಿದ್ದರು ಎಂಬ ವಿವರ ಶಾಸನಗಳಲ್ಲಿ ಇದೆ. ಪಲ್ಲವರ ಸಹೋದರ ವಂಶಾವಳಿ ಛಲವಾದಿ ಚಾಳುಕ್ಯ ಮಾದಿಗರು (ಕುರುಭರಲ್ಲಿ ಸಾದರು) ಸಹ ಲಿಂಗದಾರಿಗಳಾಗಿದ್ದ ವಿವರವಿದೆ. 2ನೇ ಶತಮಾನದಲ್ಲಿ ಭಾರತದ ವಂಶಸ್ಥರು ಭಾರ ಕುಲದ ಮಾದಿಗರು ಭಾರಶಿವ ನೆಂಬ ರಾಜ ...