Skip to main content

ಕುರುಬರ ಇತಿಹಾಸ ತಿಳಿಯಿರಿ

ಕುರುಬರ ಇತಿಹಾಸ ಪರಂಪರೆ, ಭಾಗ ೨೮

ಹಾಲುಮತ ಹುಕ್ಕಬುಕ್ಕ ಸಾಂಸ್ಕೃತಿಕ ಪ್ರತಿಷ್ಠಾನ ಬಳ್ಳಾರಿ

ಕುರುಭರು.. ನಾವು ಕುರುಭರು

ಕುರುಭರು ಇಚ್ಚಿಸಿದ್ದಲ್ಲಿ ಅವರಿಗೆ ವೈಷ್ಣವ ದೀಕ್ಷೆ ನೀಡುತ್ತೇನೆ :-- ಪೇಜಾವರ ಶ್ರೀ ಪಾದರು , ಉಡುಪಿ

ನಿಮ್ಮ ಯಾವ ದೀಕ್ಷೆಯೂ ನಮಗೆ ಬೇಕಾಗಿಲ್ಲ , ಕುರುಭರು ತಾಯಿ ಗರ್ಭದಲ್ಲಿ ಇರುವಾಗಲೇ ದೀಕ್ಷೆ ಪಡೆದವರು :- ಸಿದ್ದರಾಮಯ್ಯ , ಪ್ರಸ್ತುತ ಮುಖ್ಯಮಂತ್ರಿ

ವಾಹ್..! ಎಂಥಾ ಮಾತು ಸಿದ್ದರಾಮಯ್ಯ..
ಅಂದು ನನಗೆ ಸಿದ್ದರಾಮಯ್ಯ ಬಹಳವೇ ಇಷ್ಟವಾದರು , ಮನುಷ್ಯ ತನ್ನ ಕುಲದ ಸತ್ ಸಂಪ್ರದಾಯ ಬಿಟ್ಟುಕೊಡಲಿಲ್ಲ ...! ಭೇಷ್ ಎನಿಸಿತು.

 ಕುರುಭರ ಇತಿಹಾಸ ತಿಳಿಯಿರಿ.

ಕುರುಭರು ಮೂಲತಃ ನಾಗಕುಲದವರು ಎನ್ನಿಸಿಕೊಳ್ಳುವರು , ಪಲ್ಲವರು ಎಂದು ಕರ್ನಾಟಕದಲ್ಲಿ , ಪೊಲಿಯಾರ್ / ಪೊಲಯರ್ ಎಂದು ಕೇರಳದಲ್ಲಿ ಪಲ್ಲಿಗ ಎಂದು ಮಹಾರಾಷ್ಟ್ರದಲ್ಲಿ , ಉತ್ತರ ಭಾರತದೆಡೆ ಹಟ್ಟಿಗಾರರೆಂದು ಗುರುತಿಸಲ್ಪಡುತ್ತಾರೆ‌.
ಕುರುಭ ( ಕುರು - ಪರತತ್ವ ಭ - ಗಳಿಸುವವ) ಎಂಬ ದೀಕ್ಷಾ ಪದ್ದತಿ. ಕುರುಭ ಒಂದು ಸಿದ್ದ ಶೈವ ಶಾಖೆ.

ಕುರುಭರು ಅರ್ಥಾತ್ ಪಲ್ಲವರು 5-7ನೇ ಶತಮಾನದಲ್ಲಿ ಲಿಂಗ ದರಿಸುತ್ತಿದ್ದರು ಎಂಬ ವಿವರ ಶಾಸನಗಳಲ್ಲಿ ಇದೆ. ಪಲ್ಲವರ ಸಹೋದರ ವಂಶಾವಳಿ ಛಲವಾದಿ ಚಾಳುಕ್ಯ ಮಾದಿಗರು (ಕುರುಭರಲ್ಲಿ ಸಾದರು) ಸಹ ಲಿಂಗದಾರಿಗಳಾಗಿದ್ದ ವಿವರವಿದೆ. 2ನೇ ಶತಮಾನದಲ್ಲಿ ಭಾರತದ ವಂಶಸ್ಥರು ಭಾರ ಕುಲದ ಮಾದಿಗರು ಭಾರಶಿವ ನೆಂಬ ರಾಜ ಲಿಂಗದಾರಿಯಾದ ವಿವರಗಳಿವೆ.

ಕುರುಭರಲ್ಲಿ ಲಿಂಗವನ್ನು ಕರಡಿಗೆಯಲ್ಲಿ ಪೂಜಿಸುವ ಕ್ರಮವಿಡಿದ ಅನೇಕ ದೈವಗಳು ಇವೆ. ವೀರಶೈವ ವ್ರತವು ಮತವಾಗಿ ಪರಿವರ್ತಿತವಾಗುವ ಸಮಯದಲ್ಲಿ ಕುರುಭರ ಪ್ರಭಾವ ಅಪಾರವಾದದ್ದು.

ಕುರುಭರ ರೇವಣಸಿದ್ದ ----ವೀರಶೈವದ ಮೂಲ ಪುರುಷ

ಕುರುಭರ ಗುಡ್ಡದ ಮಲ್ಲಯ್ಯ -----ವೀರಶೈವದ  ಶ್ರೀ ಶೈಲ ಮಲ್ಲಿಕಾರ್ಜುನ (ಅಜೀವಿಕ ಸಂಪ್ರದಾಯ + ಶೈವ ಸಂಪ್ರದಾಯ)

ಬೀರೇಲಿಂಗೇಶ್ವರ --- ವೀರಭದ್ರ

ಕುರುಭರ ಕಾರ್ಣೀಕ ಮೈಲಾರಲಿಂಗ - ವೀರಶೈವದ ಮಹಾಂತ ದೇವರು    ವಿರೂಪಾಕ್ಷ

ಕುರುಭರ ದಳವಾಯಿ - ವೀರಶೈವರ ಪುರವಂತರು.

ಕುರುಭರ ನೊಳಂಬ ಪಲ್ಲವ -- > ವೀರಶೈವದ ನೊಣಬ ಲಿಂಗಾಯತ
ಹಾಗೆಯೇ
ಸಾದ ಕುರುಭರು --ಸಾದ ವೀರಶೈವ ಲಿಂಗಾಯತ
ರಟ್ಟ ಕುರುಭ - ರೆಡ್ಡಿ ವೀರಶೈವ ಲಿಂಗಾಯ್ತ
ಕುರುಭರ ಒಡೆಯ್ವಾರ - ವೀರಶೈವದ ಅಯ್ಯಾಚಾರಿ

ಕುರುಭರಲ್ಲಿ ಲಿಂಗ ಧರಿಸಿದ್ದ ಗುರುಗಳು
1) ರೇವಣ ಸಿದ್ದ , 2) ಹುಲಿಜಂತಿ ಮಾಳಿಂಗರಾಯ ,
 3) ಉಂಡಾಡಿ ಪದ್ದಣ್ಣ ರಾಯರು,
4)ಬಿಂಗಯ್ಯ (ಸೋಮೇಶ್ವರ) ,
5) ಅಪ್ಪಚ್ಚಿರಾಯ ,
6)ಮಲಿಯಾಳಯ್ಯ ,
7)ಅರಕೇರಿ ಅಮೋಘಸಿದ್ದ ,
8)ಬಪ್ಪಣ್ಣಯ್ಯ
ಇನ್ನೂ ಹಲವರು ಇದ್ದಾರೆ.

ಒಮ್ಮೆ ನೇಮ ವ್ರತವಿರುವಾಗ ಲಿಂಗದಾರಿ ಹುಲಿಜಂತಿ ಮಾಳಿಂಗರಾಯ ತನ್ನ ಹೆಂಡತಿ ಲಕ್ಷ್ಮೀದೇವಮ್ಮನನ್ನು ಕಳಶಕ್ಕೆ ಮತ್ತು ಪೂಜೆಗೆ ನೀರು ತರಲು ಕಳಿಸುತ್ತಾನೆ. ಆದರೆ ಆಕೆ ನೀರು ತರುವಾಗ ಮಾಂಸಹಾರ ತಿನ್ನುತ್ತಾಳೆ (ಆಕೆಯೂ ಲಿಂಗವಂತೆ) ಹಾಗು ಬಿಂದಿಗೆಯಲ್ಲಿ ಎರಡು ಬೊಗಸೆ ನೀರು ಕುಡಿಯುತ್ತಾಳೆ. ಮನೆಗೆ ಬಂದಾಗ ಗಂಡ ಮಾಳಿಂಗರಾಯ ಇದನ್ನು ತನ್ನ ಜ್ಞಾನಸಿದ್ದಿಯಿಂದ ಗುರುತಿಸಿ ಶಾಪವಿಡುತ್ತಾನೆ , ಲಿಂಗದ ನೇಮಕ್ಕೆ ಅಪಚಾರವಾದುದರಿಂದ ಕುರುಭರ ಮುಂದುವರಿದ ಜನಾಂಗಕ್ಕೆ ಲಿಂಗದೀಕ್ಷೆಯೇ ಆಗಬಾರದೆಂದು ಶಾಪ ನೀಡುತ್ತಾನೆ. ಆತನ ಹೆಂಡತಿ ಲಕ್ಷಿದೇವಿ ಹೊಟ್ಟೆ ನೋವಿನಿಂದ ಸಾಯುತ್ತಾಳೆ. ಮಾಳಿಂಗರಾಯನ ಶಾಪಕ್ಕೆ ನೊಂದ ನೊಳಂಬರು ಲಾಕುಲೀಶ (ಇಂದಿನ ವೀರಶೈವರ ವೃಷಭಾಚಾರ್ಯರ) ಶೈವವನ್ನು ಅನುಸರಿಸುತ್ತಾರೆ.
ಹಲವರ ಬೇಡಿಕೆಯ ಮೇರೆಗೆ ಮಾಳಿಂಗರಾಯ ರೇವಣಸಿದ್ದನ ಕಾರ್ಣೀಕವನ್ನು ನುಡಿದು ಅನುಗ್ರಹಿಸುತ್ತಾನೆ. ಅಂದಿನಿಂದ ಕುರುಬರು ರೇವಣಸಿದ್ದನು ಹುಟ್ಟಿಬರುವನೆಂದು ಕಾದು ಕುಳಿತುಕೊಳ್ಳುತ್ತಾರೆ.
ನಂತರದ ಮಾಳಿಂಗರಾಯ ಕಾಲವಾದ ನಂತರ ಕುರುಭರ ಇನ್ನೋರ್ವ ಪ್ರಮೂಖ ಗುರುಗಳಾದ ಬಿಂಗಯ್ಯ ತಮ್ಮ ಸಮುದಾಯ ಲಿಂಗದೀಕ್ಷೆಯಿಂದ ವಂಚಿತತರಾದದ್ದನ್ನು ನೆನೆದು ಕುರಿ ದೊಡ್ಡಿಯಲ್ಲಿ ಕಣ್ಣೀರು ಹಾಕುತ್ತಿರುತ್ತಾರೆ. ಆಗ ಮಾಳಿಂಗರಾಯ ಬಿಂಗಯ್ಯರ ಕನಸಿನಲ್ಲಿ ಬಂದು ಸಹಜ ಭಕ್ತಿಯೇ ಸಾಕು ಶಿವನೊಲಿಯಲು ಎಂದು ಸಂತೈಸುತ್ತಾರೆ. ಇದೇ ಸಂಧರ್ಬದಲ್ಲಿ ಬಿಂಗಯ್ಯರಿಗೆ ಕುರಿಯ ಹಿಕ್ಕೆ ( ಸಗಣಿ , ಮಲ) ಯಲ್ಲಿ ಲಿಂಗ ದರ್ಶನವಾಗುತ್ತದೆ.

ವೀರಶೈವ ವ್ರತವು ಮತ ಸ್ವರೂಪ ಪಡೆಯುವಾಗ ಕುರುಭರು ಸಿದ್ದ ಶೈವ , ಲಾಕುಲೀಶರು , ಕಾಳಮುಖರ ಪ್ರಭಾವ ಅಪಾರವಿದೆ.

Comments

Popular posts from this blog

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜೀವನ ಚರಿತ್ರೆಯನ್ನೊಮ್ಮೆ ಓದಿ

ಸಂಗೊಳ್ಳಿ ರಾಯಣ್ಣ  –  ಬ್ರಿಟಿಷರ  ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರಲ್ಲೊಬ್ಬ.  ಕಿತ್ತೂರು ಚೆನ್ನಮ್ಮಳ  ಬಲಗೈ ಬಂಟನಾದವನು ಸಂಗೊಳ್ಳಿ ರಾಯಣ್ಣ. ಪರಿಚಯ ಸಂಪಾದಿಸಿ ಬೆಳಗಾವಿ  ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿರುವ ನೇಗಿನಹಾಳ ಗ್ರಾಮವು ಕೆಂಚವ್ವನ ತವರು ಮನೆಯಾಗಿದ್ದರು ಸಂಗೊಳ್ಳಿಯು ರಾಯಣ್ಣನ ಜನ್ಮಸ್ಥಳ ಹಾಗೂ ಹೋರಾಟದ ಭೂಮಿಯಾಗಿದೆ. ಚೆನಮ್ಮಳ ಆಸ್ತಾನದಲ್ಲಿ ವಾಲಿಕರ್ ವೃತ್ತಿ ಮಾಡುವ ಕುರುಬ ಮನೆತನದವನಾಗಿದ್ದ ರಾಯಣ್ಣನನ್ನು ಜನ, ರಾಯಾ ಎಂದು ಕರೆಯುತ್ತಿದರು. ಅಷ್ಠೆ ಅಲ್ಲದೆ ಈತನು ಗೇರಿಲ್ಲಾ ತಂತ್ರದ ರೂವಾರಿಯಾಗಿದ್ದನು.  ಬ್ರಿಟಿಷರ  ವಿರುದ್ಧದ ಯುದ್ಧದಲ್ಲಿ ಚನ್ನಮ್ಮ ಹಾಗು ರಾಯಣ್ಣ ಇಬ್ಬರೂ ಸೆರೆಯಾಳಾದರು.  ಬ್ರಿಟಿಷರು ಚನ್ನಮ್ಮನನ್ನು  ಬೈಲಹೊಂಗಲದಲ್ಲಿ  ಸೆರೆಯಲ್ಲಿಟ್ಟರು. ಸಂಗೊಳ್ಳಿ ರಾಯಣ್ಣನನ್ನು ಬ೦ಧಿಸಿ ನ೦ದಗಡ ದಲ್ಲಿ ಗಲ್ಲಿಗೆರಿಸಿದರು.  ಜನವರಿ ೨೬  ೧೮೩೧ರಂದು ಗಲ್ಲಿ ಗೇರಿಸಿದರು. ಸಂಗೊಳ್ಳಿ ರಾಯಣ್ಣ ಜನಿಸಿದ ದಿನಾಂಕವಾದ  ಆಗಸ್ಟ್ ೧೫  ೧೭೯೮ ,  ಭಾರತಕ್ಕೆ  ಸ್ವಾತಂತ್ರ್ಯ ದೊರೆತ ದಿನಾಂಕವಾದರೆ, ಆತ ಗಲ್ಲಿಗೇರಿದ ದಿನಾಂಕ  ಜನವರಿ ೨೬ , ಭಾರತವು  ಗಣರಾಜ್ಯವೆಂದು  ಘೋಷಿಸಿದ ದಿನಾಂಕವಾಗಿದೆ. ರಾಯಣ್ಣನ ಉಕ್ತಿ, “ನನ್ನ ಕೊನೆ ಆಸೆ ಏನೆಂದರೆ, ಮತ್ತೆ ನಾನು ಈ ದೇಶದಲ್ಲಿ...

ಕುರುಬರು ಭಾರತದ ಇತಿಹಾಸದ ಮೊದಲ ಸಾಮ್ರಾಜ್ಯವಾದ ಮೌರ್ಯ ಸಾಮ್ರಾಜ್ಯವನ್ನು ಕಟ್ಟಿದವರು.

ಕುರುಬ ಒಂದು ಹಿಂದು ಸಮುದಾಯದ ಹೆಸರು. ಕುರುಬ ಎಂದರೆ ಹುಡುಕುವ ಅಥವ ಪಡೆಯುವ ಎಂದು ಅರ್ಥ ಬರುತ್ತದೆ. ಉದಾಹರಣೆ: ಜೇನು ಕುರುಬ ಜಾತಿ ಎಂದರೆ ಜೇನು ಹುಡುಕುವ ಜಾತಿ. ಕುರುಬರು ಹಾಲುಮತ ಅನುಯಾಯಿಗಳು. ಕುರುಬ ಎಂದರೆ ಜ್ಞಾನವನ್ನು(ಭ) ಹುಡುಕುವವನು (ಕುರು) ಎಂಬ ದಾರ್ಮಿಕ ಅರ್ಥವು ಇದೆ. ಕುರುಬ ಜಾತಿಯು ಅತಿ ಪುರಾತನವಾದ ಜಾತಿ.  ಇತಿಹಾಸ ಪೂರ್ವ ಕುರುಬ ಜನಾಂಗ ತುಂಬಾ ಪುರಾತನವಾದ ಜನಾಂಗ , ರಾಮಾಯಣ ಮತ್ತು ಮಹಾಭಾರತ ಕಾಲದಲ್ಲಿ ಕುರು ವಂಶ ಮತ್ತು ಯದು ವಂಶಗಳ ಪ್ರಸ್ತಾವನೆಯಾಗಿದೆ. ಮಾನವನು ಮೊದಲು ಕಾಡುಗಳಲ್ಲಿ ಬೇಟೆ ಆಡಿ ಮತ್ತು ಅಲೀದು ಗೆಡ್ಡೆ, ಗೆಣಸು ತಿನ್ನುತಿದ್ದ , ಕ್ರಮೇಣ ಅವನು ಪ್ರಾಣಿಗಳನ್ನು ಪಳಗಿಸಿ ಸಾಕ ತೊಡಗಿದ, ಆ ನಂತರ ಅವನು ವ್ಯವಸಾಯ ಮಾಡುವದನ್ನು ಕಲಿತ, ನಂತರ ಅವನು ಹಳ್ಳಿಗಳಲ್ಲಿ ವಾಸಿಸ ತೊಡಗಿದ. ಕುರುಬರು ಈ ಎಲ್ಲ ಮಾನವನ ಆಯಾಮಗಳನ್ನು ದಾಟಿದವರು. ಅತಿ ಪುರಾತನವಾದ ಈ ಸಮುದಾಯದಿಂದ ಕಾಲ ಕ್ರಮೇಣ ಇತರೆ ಜನಾಂಗದವರು ಬೇರೆಯಾಗ ತೊಡಗಿದರು. ಉದಾಹರಣೆಗೆ ವಕ್ಕಲುತನ ಮಾಡುವನು ವಕ್ಕಲಿಗನಾದ, ಬೇಟೆಯಾಡು ವವನು ಬೇಡನಾದ , ಮಡಿಕೆ ಮಾಡುವವನು ಕುಂಬಾರನಾದ , ಈ ಇತರೆ ಜನಾಂಗದವರು ಮಾನವನ ಬೇಡಿಕೆಗಳಿಗೆ ಅನುಗುಣವಾಗಿ ತಮ್ಮ ವೃತ್ತಿಗಳನು ಮಾಡತೊಡಗಿದರು. ಹೀಗೆ ಪುರಾತನವಾದ ಕುರುಬ ಮತ್ತು ಯಾದವ ವಂಶಗಳಿಂದ ಸಣ್ಣ ಪುಟ್ಟ ಜಾತಿಗಳು ಹುಟ್ಟಿಕೊಂಡವು. ಭಾರತ ಇತಿಹಾಸ . ಕುರುಬರು ಭಾರತದ ಇತಿಹಾಸದ ಮೊದಲ ಸಾಮ್ರಾಜ್ಯವಾದ ಮೌರ್ಯ...