Skip to main content

Posts

ಬೀರಪ್ಪ ದೇವರ ಅಗ್ನಿ ಪವಾಡದ ಬಗ್ಗೆ ತಿಳಿದುಕೊಳ್ಳಿ

Recent posts

ಭಕ್ತರ ಬಂಧು ಕುರುಬ ಗೊಲ್ಲಾಳೇಶ್ವರನ ಪವಾಡ

ಭಕ್ತರ ಬಂಧು ಕುರುಬ ಗೊಲ್ಲಾಳೇಶ್ವರನ ಪವಾಡ ಸಿಂದಗಿ ತಾಲೂಕಿನ ಗೋಲಗೇರಿ ಅಂದಾಜು 800 ವರ್ಷಗಳ ಪೌರಾಣಿಕ ಇತಿಹಾಸ ಹೊಂದಿದ ಗ್ರಾಮ. ಹಿಂದೆ ಲಿಂಗಯ್ಯನಪುರ ಎಂದು ಕರೆಯಲಾಗುತ್ತಿದ್ದ ಈ ಗ್ರಾಮದ ಪಕ್ಕದ ಢವಳಾರ ಗ್ರಾಮದಲ್ಲಿ ಕುರುಬ ಸಮಾಜದ ಕುಟುಂಬವೊಂದು ವಾಸವಾಗಿತ್ತು. ಈ ಕುಟುಂಬದಲ್ಲಿ ಜನಿಸಿದ ಗೊಲ್ಲಾಳನೆಂಬ ಭಕ್ತನಿಗೆ ಶಿವ ಪ್ರಸನ್ನನಾದ ಎಂಬ ಕಥೆ ಕೇಳಿಬರುತ್ತದೆ. ನಂತರ ಇಲ್ಲಿ ಶಿವ ಹಾಗೂ ಭಕ್ತನೇ ದೈವವಾಗಿ ಗೊಲ್ಲಾಳೇಶ್ವರ ಎಂಬ ನಾಮದಿಂದ ಶಿವಭಕ್ತ ಪರಂಪರೆ ಬೆಳೆದುಬಂದದ್ದು ಇತಿಹಾಸ. ಢವಳಾರ ಗ್ರಾಮದ ಬಲ್ಲುಗ ದುಗ್ಗಳಾದೇವಿ ಎಂಬ ಕುರುಬ ಕುಟುಂಬದಲ್ಲಿ ಜನಿಸಿದ ಗೊಲ್ಲಾಳ ಕುಲವೃತ್ತಿಯಂತೆ ಕುರಿ ಕಾಯುತ್ತಿದ್ದ. ಸದಾ ಶಿವ ಧ್ಯಾನ ನಡೆಸುತ್ತಿದ್ದ ಈತ ಶಿವಲಿಂಗವೇ ಸಾಕ್ಷಾತ್‌ ಶಿವ ಎಂದು ನಂಬಿದ್ದ. ಪ್ರತಿ ವರ್ಷ ಚೈತ್ರಮಾಸದಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ಜ್ಯೋತಿರ್ಲಿಂಗ ದರ್ಶನಕ್ಕಾಗಿ ಪಾದಯಾತ್ರೆ ಮೂಲಕ ತೆರಳುತ್ತಿದ್ದ ಭಕ್ತರು ಹಾಗೂ ಕಂಬಿ ಸ್ವಾಮಿಗಳನ್ನು ಕಂಡು ಭಾವುಕನಾದ ಗೊಲ್ಲಾಳನು ನಂದಯ್ಯನೆಂಬ ಸ್ವಾಮಿಗಳನ್ನು ಕಂಡು ತನ್ನ ಬಳಿ ಇದ್ದ ಹೊನ್ನಿನ ನಾಣ್ಯ ನೀಡಿ ಶ್ರೀಶೈಲದಿಂದ ಬರುವಾಗ ಶಿವಲಿಂಗ ತರುವಂತೆ ಕೇಳಿಕೊಂಡ. ನಂದಯ್ಯ ಸ್ವಾಮಿಗಳು ಆಗಲಿ ಎಂದು ಶ್ರೀಶೈಲಕ್ಕೆ ತೆರಳಿ ದರ್ಶನ ಪಡೆದು ಗೋಲಗೇರಿ ಗ್ರಾಮದ ಬಳಿ ಬಂದಾಗ ಶಿವಲಿಂಗ ತರುವಂತೆ ಗೊಲ್ಲಾಳ ಹೇಳಿದ ಮಾತು ನೆನಪಾಯಿತು. ಆದರೆ ಅವರು ಲಿಂಗ ತಂದಿರಲಿಲ್ಲ. ಪಕ್ಕದಲ್ಲೇ ...

ಹಾಲುಮತದ ಸಿದ್ದ ಪುರುಷ ಗಾದಿಲಿಂಗಪ್ಪ ತಾತನ ಬಗ್ಗೆ ತಿಳಿದುಕೊಳ್ಳಿ

ಹಕ್ಕಬುಕ್ಕರು ಪಕ್ಕ ಕುರುಬರು , ಸಾಕ್ಷಿ ಬೇಕಾ ಒಮ್ಮೆ ಓದಿ

ಕುರುಬ ಬಂಧುಗಳೇ ನೀವು ಕೂಡ ಸಮಾಜದ ಅಭಿವೃದ್ಧಿ ಗಾಗಿ ಪಣ ತೊಡಿ

ನಮ್ಮ ಹಾಲುಮತ ಕುರುಬ ಸಮಾಜ ನಮಗೆ ಹೆಮ್ಮೆ ನಮ್ಮ ಕನಕ ಗುರುಪೀಠ ನಮಗೆ ಶಕ್ತಿ... ---------------------------------------------------- ಕುರುಬರ ಶಕ್ತಿ ಪೀಠ ಶ್ರೀಕಾಗಿನೆಲೆ ಕನಕಗುರುಪೀಠಕ್ಕಾಗಿ ಪ್ರತಿನಿತ್ಯ "ಒಂದೊಂದು ರೂಪಾಯಿ" ಕನಕ ಹುಂಡಿಗೆ ಹಾಕುತ್ತಿದ್ದೇವೆ. ನಮ್ಮ ಮನೆಯಲ್ಲಿ ಇಬ್ಬರು ಎರಡೆರೆಡು ರೂಪಾಯಿಗಳನ್ನು ಹಾಕುತ್ತಿದ್ದೇವೆ. ನನ್ನ ಆಫೀಸಿನಲ್ಲೂ ಒಂದು "ಕನಕ ಹುಂಡಿ"ಇಟ್ಟಿದ್ದೇನೆ. ಅಲ್ಲೂಸಹ ಒಂದೊಂದು ರೂಪಾಯಿ " ಕನಕ ಹುಂಡಿ" ಗೆ ಹಾಕುತ್ತಿದ್ದೇನೆ. ಶ್ರೇಷ್ಟ ಹಾಲುಮತ- ಕುರುಬ ಸಮಾಜದಲ್ಲಿ ಹುಟ್ಟಿದ್ದೇವೆ. ಕುರುಬರ ಸಂಘಟನೆಗಾಗಿ, ಜಾಗೃತಿಗಾಗಿ ನಮ್ಮ ಕನಕ ಗುರುಪೀಠದ ಜಗದ್ಗುರುಗಳು ಶ್ರಮಿಸುತ್ತಿದ್ದಾರೆ. ನಾವು ಮಠಕ್ಕಾಗಿ ತ್ಯಾಗ ಮಾಡಲು ಸಾಧ್ಯವಾಗುವುದಿಲ್ಲ.. ಆದರೆ ನಮ್ಮ ಕುರುಬರ ಮಠಗಳಿಗಾಗಿ " ದಿನಕ್ಕೊಂದು ರೂಪಾಯಿ" ಕೊಡಬಹುದಲ್ಲ. ಒಂದು ರೂಪಾಯಿ ನನ್ನ ಮಠದ ಅಭಿವೃದ್ಧಿಗೆ ಕೊಡುತ್ತಿದ್ದೇನೆ ಎಂಬ ಆತ್ಮ ತೃಪ್ತಿಯೂ ನನಗೆ / ನಿಮಗೆ ಇರುತ್ತದೆ. "ಮನೆಯಲ್ಲೊಂದು ಕನಕ ಹುಂಡಿ, ಸಮಾಜಕ್ಕಾಗಿ ಒಂದೊಂದು ರೂಪಾಯಿ" ಅಭಿಯಾನ ಕಳೆದ ವರ್ಷ ಕನಕ ಜಯಂತಿಯ ದಿನದಿಂದ " ಶ್ರೀಕನಕಮಾಲೆ" ಅಭಿಯಾನದಲ್ಲಿ ಪ್ರಾರಂಭಿಸಿದ್ದೇವೆ. ಈ ವರ್ಷದ 2019 ರ ನವೆಂಬರ್ ನಲ್ಲಿ ಕಾಗಿನೆಲೆಯಲ್ಲಿ ನಡೆಯುವ " ಶ್ರೀಕನಕದಾಸರ ತೊಟ್ಟಿಲೋತ್ಸವ - ಶ್ರೀ...

ವಿಜಯನಗರ ಸಾಮ್ರಾಜ್ಯಕ್ಕೆ ಬುನಾದಿ ಹಾಕಿದ ಹಕ್ಕಬುಕ್ಕ ಕುರುಬಗೌಡರು ಜನಿಸಿದ ದಿನ.

*ಕುರುಬ ಕುಲದೊಳಗೊಬ್ಬ ಧರಣಿ ಪಾಲಕ_ಹುಟ್ಟಿ* *ಉರವಣಿಸಿ_ಧರಣಿಯೋಳು ಕದನ ಪೆಚ್ಚಲು* *ಹಂಪಿಯಲಿ ಕರಿಯ ಕಟ್ಟಿದರು ಸವ೯ಜ್ಞ* 🚩🕉🚩🕉🚩🕉🚩 ಈ ದಿನ ಇತಿಹಾಸದ ಪುಟದೊಳಗೆ ಹೊಸ ಅದ್ಭುತ ಸೃಷ್ಟಿಯಾದ ದಿನ. ಸಮಸ್ತ ಭಾರತವನ್ನು ಒಗ್ಗೂಡಿಸಿ ಬೃಹತ್ ಸಾಮ್ರಾಜ್ಯ ಕಟ್ಟಲು ಆದಿಯಾದ ದಿನ. ಭವಿಷ್ಯದ ವಿಜಯನಗರ ಸಾಮ್ರಾಜ್ಯಕ್ಕೆ  ಬುನಾದಿ ಹಾಕಿದ ಹಕ್ಕಬುಕ್ಕ ಕುರುಬಗೌಡರು ಜನಿಸಿದ ದಿನ. 🕉🚩🕉🚩🕉🚩🕉 ಹಕ್ಕ,ಬುಕ್ಕ,ಮುದ್ದಣ್ಣ,ಮಾರಪ್ಪ,ಕಂಪಣ್ಣ ಎಂಬ ಐವರು ಕುರಿಗಾಹಿ ಸಹೋದರರು. ಅವರಲ್ಲಿ ಹಕ್ಕಬುಕ್ಕರು ಪ್ರಭಲ ಪರಾಕ್ರಮಿಗಳು ಶಿವಭಕ್ತರು. ಅವರಿಂದ ಪ್ರಾರಂಭವಾದ ಸಾಮ್ರಾಜ್ಯವೇ ವಿಜಯನಗರ ಸಾಮ್ರಾಜ್ಯ!. ವಿಜಯನಗರ ಕಟ್ಟಿದ ವೀರ ಕುರುಬರಾದ ಹಕ್ಕಬುಕ್ಕರನ್ನು ಇತ್ತೀಚೆಗೆ ಕೆಲವು ಬು(ಲ)ದ್ಧಿ ಜೀವಿಗಳು ಬೇಡರನ್ನಾಗಿ,ಬ್ರಾಹ್ಮಣರನ್ನಾಗಿ ಮಾಡಲು ತಮಗೆ ತಿಳಿದಂತೆ ಅಧ್ಯಯನ ಮಾಡಿದ್ದು ವಿಪಯಾ೯ಸವೇ ಸರಿ. ಆದರೆ ಅಂದಿನ ಶಾಸನಗಳನ್ನು,ದೇವಸ್ಥಾನಗಳನ್ನು,ಜನಪದರನ್ನು ಇವರು ಹೈಜಾಕ್ ಮಾಡಲು ಸಾಧ್ಯವೇ ಇಲ್ಲ. ಅದೇನೆ ಇರಲಿ ಆದರೆ ಇಡೀ ಭಾರತ ದೇಶ ಅರಬ್ ದಿಂದ ಬಂದವರಿಂದ ನಾಶವಾಗುತ್ತಿತ್ತು ಅಂತಹ ಸಂದಭ೯ದಲ್ಲಿ ದೇಶ,ಧಮ೯ದ ರಕ್ಷಣೆ ಮಾಡಲು ಕಂಕಣ ಕಟ್ಟಿ ನಿಂತವರು ಹಕ್ಕ ಬುಕ್ಕರು. 🚩🕉🚩🕉🚩🕉🚩 ಹಕ್ಕಬುಕ್ಕರು ಕುರುಬರು ಎಂದರೆ ಕೆಲವರಿಗೆ ಸಹಿಸಲಸಾಧ್ಯ ಉರಿ! ಆದರೆ ಅಂತವರು ಗಮನಿಸಬೇಕಾದದ್ದು ಏನೆಂದರೆ. *ಕುರುಬರು ಎಂದರೆ ಕೇವಲ ಕುರಿ ಕಾಯುವ ವೃತ್ತ...

ಇದೊಂದು ಐತಿಹಾಸಿಕ ದಿನ.. ಐತಿಹಾಸಿಕ ಸಭೆ.

ಇದೊಂದು ಐತಿಹಾಸಿಕ ದಿನ.. ಐತಿಹಾಸಿಕ ಸಭೆ. ------------------------------------------------- ಕುರುಬ ಸಮಾಜದಲ್ಲಿ ಸ್ವಯಂ ಪ್ರೇರಿತರಾಗಿ ರಾಜ್ಯದ ವಿವಿಧೆಡೆಯಿಂದ ಕುರುಬರ ಶಕ್ತಿಕೇಂದ್ರ ಶ್ರೀಕನಕಗುರುಪೀಠದಲ್ಲಿ ಕೂತು "ಎಸ್.ಟಿ. ಮೀಸಲಾತಿಯ ಬಗ್ಗೆ ಪೂರ್ವಭಾವಿ ಸಭೆಯಲ್ಲಿ ಅತ್ಯುತ್ತಮ ಸಂದೇಶವನ್ನು ಪಡೆದಂತಹ ಎಲ್ಲಾ ನಮ್ಮ ಬಂಧುಗಳಿಗೆ ಕರ ಜೋಡಿಸಿ ವಂದನೆಗಳನ್ನು ಸಲ್ಲಿಸುತ್ತಿದ್ದೇವೆ. ಕುರುಬರಿಗೆ ಎಸ್. ಟಿ. ಮೀಸಲಾತಿ ಬೇಕು ಎಂಬ ಕೂಗನ್ನು ಸರ್ಕಾರಕ್ಕೆ ಮುಟ್ಟುವಂತೆ ಮಾಡುವ ಪ್ರಾಮಾಣಿಕ ಪ್ರಯತ್ನ ಮಹಾಸಭಾ ಮಾಡುತ್ತಲೇ ಇದೆ. ಸಂವಾದ, ಜನಾಭಿಪ್ರಾಯ ಸಭೆಗಳು, ಸಮಾವೇಶ, ಧರಣಿ, ಸರ್ಕಾರದ ಜೊತೆ ಮಾತುಕತೆ. ಅಟ್ರಾಸಿಟಿ ದೌರ್ಜನ್ಯದ  ಮುಕ್ತಿಗಾಗಿ ಸರ್ಕಾರ ಕೇಳಿದ್ದ ದಾಖಲೆಗಳನ್ನು ನೀಡಲಾಗಿತ್ತು. ಮುಂದುವರೆದು ಇಂದು ಎಸ್.ಟಿ. ಮೀಸಲಾತಿ ಬೇಡಿಕೆಯ ಹೋರಾಟಗಳನ್ನು ತೀವ್ರಗೊಳಿಸಲು ಗುರಿಮುಟ್ಟುವ ಸಂಕಲ್ಪ ಮಾಡಲಾಗಿದೆ. 1) ಬೀದರ್ 2) ಯಾದಗಿರಿ 3) ಕಲಬುರಗಿ ಮೂರು ಜಿಲ್ಲೆಗಳ ಎಸ್.ಟಿ. ಶಿಫಾರಸ್ಸುನ್ನು ಶೀಘ್ರವಾಗಿ ಅನುಮೋದನೆ ಮಾಡಿಸಲು ನಿರ್ಣಯ ಕೈಗೊಳ್ಳಲಾಗಿದೆ. ಜೊತೆಗೆ ಹಲವು ನಿರ್ಣಯಗಳನ್ನು ಮಾಡಲಾಗಿದ್ದು..ರೂಪುರೇಷಗಳು ಮುಂದಿನ ದಿನಗಳಲ್ಲಿ ಸಮಾಜದ ಮುಂದೆ ತಿಳಸಿಸಲಾಗುವುದು ಸಮಾಜ ಒಂದುಗೂಡಿದರೆ ನಮ್ಮ ಎಸ್.ಟಿ. ಮೀಸಲಾತಿ ಹಕ್ಕನ್ನು ನಾವು ಪಡೆದೇ ತೀರುತ್ತೇವೆ. "ಇದು ಸ್ವಾಭಿಮಾನಿ ಕುರುಬರ ಸಂಕಲ್ಪ" - ಮ...