Skip to main content

ಭಕ್ತರ ಬಂಧು ಕುರುಬ ಗೊಲ್ಲಾಳೇಶ್ವರನ ಪವಾಡ

ಭಕ್ತರ ಬಂಧು ಕುರುಬ ಗೊಲ್ಲಾಳೇಶ್ವರನ ಪವಾಡ

ಸಿಂದಗಿ ತಾಲೂಕಿನ ಗೋಲಗೇರಿ ಅಂದಾಜು 800 ವರ್ಷಗಳ ಪೌರಾಣಿಕ ಇತಿಹಾಸ ಹೊಂದಿದ ಗ್ರಾಮ. ಹಿಂದೆ ಲಿಂಗಯ್ಯನಪುರ ಎಂದು ಕರೆಯಲಾಗುತ್ತಿದ್ದ ಈ ಗ್ರಾಮದ ಪಕ್ಕದ ಢವಳಾರ ಗ್ರಾಮದಲ್ಲಿ ಕುರುಬ ಸಮಾಜದ ಕುಟುಂಬವೊಂದು ವಾಸವಾಗಿತ್ತು. ಈ ಕುಟುಂಬದಲ್ಲಿ ಜನಿಸಿದ ಗೊಲ್ಲಾಳನೆಂಬ ಭಕ್ತನಿಗೆ ಶಿವ ಪ್ರಸನ್ನನಾದ ಎಂಬ ಕಥೆ ಕೇಳಿಬರುತ್ತದೆ. ನಂತರ ಇಲ್ಲಿ ಶಿವ ಹಾಗೂ ಭಕ್ತನೇ ದೈವವಾಗಿ ಗೊಲ್ಲಾಳೇಶ್ವರ ಎಂಬ ನಾಮದಿಂದ ಶಿವಭಕ್ತ ಪರಂಪರೆ ಬೆಳೆದುಬಂದದ್ದು ಇತಿಹಾಸ.

ಢವಳಾರ ಗ್ರಾಮದ ಬಲ್ಲುಗ ದುಗ್ಗಳಾದೇವಿ ಎಂಬ ಕುರುಬ ಕುಟುಂಬದಲ್ಲಿ ಜನಿಸಿದ ಗೊಲ್ಲಾಳ ಕುಲವೃತ್ತಿಯಂತೆ ಕುರಿ ಕಾಯುತ್ತಿದ್ದ. ಸದಾ ಶಿವ ಧ್ಯಾನ ನಡೆಸುತ್ತಿದ್ದ ಈತ ಶಿವಲಿಂಗವೇ ಸಾಕ್ಷಾತ್‌ ಶಿವ ಎಂದು ನಂಬಿದ್ದ.

ಪ್ರತಿ ವರ್ಷ ಚೈತ್ರಮಾಸದಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ಜ್ಯೋತಿರ್ಲಿಂಗ ದರ್ಶನಕ್ಕಾಗಿ ಪಾದಯಾತ್ರೆ ಮೂಲಕ ತೆರಳುತ್ತಿದ್ದ ಭಕ್ತರು ಹಾಗೂ ಕಂಬಿ ಸ್ವಾಮಿಗಳನ್ನು ಕಂಡು ಭಾವುಕನಾದ ಗೊಲ್ಲಾಳನು ನಂದಯ್ಯನೆಂಬ ಸ್ವಾಮಿಗಳನ್ನು ಕಂಡು ತನ್ನ ಬಳಿ ಇದ್ದ ಹೊನ್ನಿನ ನಾಣ್ಯ ನೀಡಿ ಶ್ರೀಶೈಲದಿಂದ ಬರುವಾಗ ಶಿವಲಿಂಗ ತರುವಂತೆ ಕೇಳಿಕೊಂಡ.

ನಂದಯ್ಯ ಸ್ವಾಮಿಗಳು ಆಗಲಿ ಎಂದು ಶ್ರೀಶೈಲಕ್ಕೆ ತೆರಳಿ ದರ್ಶನ ಪಡೆದು ಗೋಲಗೇರಿ ಗ್ರಾಮದ ಬಳಿ ಬಂದಾಗ ಶಿವಲಿಂಗ ತರುವಂತೆ ಗೊಲ್ಲಾಳ ಹೇಳಿದ ಮಾತು ನೆನಪಾಯಿತು. ಆದರೆ ಅವರು ಲಿಂಗ ತಂದಿರಲಿಲ್ಲ. ಪಕ್ಕದಲ್ಲೇ ಬಿದ್ದಿದ್ದ ಕುರಿ ಹಿಕ್ಕಿ ತೆಗೆದುಕೊಂಡು 'ಇದು ಸಾಕ್ಷಾತ್‌ ಶಿವಲಿಂಗ' ಎಂದು ಗೊಲ್ಲಾಳನ ಕೈಗೆ ನೀಡಿ ಅಷ್ಟಾವರಣ ಪೂಜೆ ವಿಧಿ ಬೋಧಿಸಿ ಮುಂದೆ ತೆರಳುತ್ತಾರೆ.

ಇತ್ತ ಗೊಲ್ಲಾಳರು ನಂದಯ್ಯ ಸ್ವಾಮಿಗಳ ಮಾತು ನಂಬಿ ನಿತ್ಯ ಆ ಹಿಕ್ಕಿಗೆ ಹಾಲು, ಮೊಸರು ಸೇರಿದಂತೆ ಪಂಚಾಮೃತಗಳಿಂದ ಅಷ್ಟಾವರಣ ಪೂಜೆ ಕೈಗೊಂಡು ಶಿವನಾಮ ಜಪ, ಧ್ಯಾನ ಕೈಗೊಳ್ಳುತ್ತಾರೆ. ಹಸಿವು, ನೀರಡಿಕೆಯನ್ನೂ ಲೆಕ್ಕಿಸದೆ ಧ್ಯಾನ ಕೈಗೊಳ್ಳುತ್ತಿದ್ದ ಗೊಲ್ಲಾಳರನ್ನು ಕಂಡ ತಂದೆ ಬಲ್ಲುಗ ಕೋಪಗೊಳ್ಳುತ್ತಾರೆ. ಗೊಬ್ಬರದ ಗುಂಡಿಯಲ್ಲಿ ಗೊಲ್ಲಾಳ ಪ್ರತಿಷ್ಠಾಪಿಸಿದ್ದ ಹಿಕ್ಕೆ(ಲಿಂಗ) ಹಾಗೂ ಗೊಬ್ಬರದ ಗುಂಡಿಯನ್ನು ಚೆಲ್ಲಾಪಿಲ್ಲಿಯಾಗಿಸುತ್ತಾರೆ.

ಇದರಿಂದ ಕೋಪಗೊಂಡ ಗೊಲ್ಲಾಳ ತಂದೆಯೆಂಬ ಮೋಹವನ್ನೂ ತೊರೆದು ಅವರ ಶಿರಚ್ಛೇದನ ಮಾಡುತ್ತಾನೆ. ಆಗ ಗೊಬ್ಬರದ ಗುಂಡಿಯಲ್ಲಿದ್ದ ಕುರಿ ಹಿಕ್ಕಿಯಿಂದ ಶಿವಲಿಂಗ ಉದ್ಭವಿಸುತ್ತದೆ. ಶಿವ ಪ್ರತ್ಯಕ್ಷ್ಯನಾಗಿ ಭಲೇ ಗೊಲ್ಲಾಳ, ನಾನೇ ನೀನಾಗಿ, ನೀನೇ ನಾನಾಗಿ ಇಲ್ಲಿಯೇ ಲಿಂಗರೂಪದಲ್ಲಿ ನೆಲೆಗೊಳ್ಳುವೆ. ಮುಂದೆ ಈ ಸ್ಥಳ ಗೊಲ್ಲಾಳೇಶ್ವರ ಎಂಬ ಖ್ಯಾತಿಯಿಂದ ಭೂಕೈಲಾಸವಾಗಲಿ, ಭಕ್ತಿ, ನಿಷ್ಠೆ, ಅಚಲ ನಂಬಿಕೆಗಳೇ ಈ ಕ್ಷೇತ್ರದ ಹಿರಿಮೆಯಾಗಲಿ ಎಂದು ಹರಸಿ ಲಿಂಗದಲ್ಲಿ ಲೀನನಾದ ಎಂಬುದು ಪುರಾಣದಿಂದ ತಿಳಿದುಬರುತ್ತದೆ. ಈ ಕ್ಷೇತ್ರಕ್ಕೆ ಇಂದಿಗೂ ಅಪಾರ ಭಕ್ತರು ನಡೆದುಕೊಳ್ಳುತ್ತಾರೆ.

#ಕುರುಬರು_ಪೇಜ್

Comments

Popular posts from this blog

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜೀವನ ಚರಿತ್ರೆಯನ್ನೊಮ್ಮೆ ಓದಿ

ಸಂಗೊಳ್ಳಿ ರಾಯಣ್ಣ  –  ಬ್ರಿಟಿಷರ  ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರಲ್ಲೊಬ್ಬ.  ಕಿತ್ತೂರು ಚೆನ್ನಮ್ಮಳ  ಬಲಗೈ ಬಂಟನಾದವನು ಸಂಗೊಳ್ಳಿ ರಾಯಣ್ಣ. ಪರಿಚಯ ಸಂಪಾದಿಸಿ ಬೆಳಗಾವಿ  ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿರುವ ನೇಗಿನಹಾಳ ಗ್ರಾಮವು ಕೆಂಚವ್ವನ ತವರು ಮನೆಯಾಗಿದ್ದರು ಸಂಗೊಳ್ಳಿಯು ರಾಯಣ್ಣನ ಜನ್ಮಸ್ಥಳ ಹಾಗೂ ಹೋರಾಟದ ಭೂಮಿಯಾಗಿದೆ. ಚೆನಮ್ಮಳ ಆಸ್ತಾನದಲ್ಲಿ ವಾಲಿಕರ್ ವೃತ್ತಿ ಮಾಡುವ ಕುರುಬ ಮನೆತನದವನಾಗಿದ್ದ ರಾಯಣ್ಣನನ್ನು ಜನ, ರಾಯಾ ಎಂದು ಕರೆಯುತ್ತಿದರು. ಅಷ್ಠೆ ಅಲ್ಲದೆ ಈತನು ಗೇರಿಲ್ಲಾ ತಂತ್ರದ ರೂವಾರಿಯಾಗಿದ್ದನು.  ಬ್ರಿಟಿಷರ  ವಿರುದ್ಧದ ಯುದ್ಧದಲ್ಲಿ ಚನ್ನಮ್ಮ ಹಾಗು ರಾಯಣ್ಣ ಇಬ್ಬರೂ ಸೆರೆಯಾಳಾದರು.  ಬ್ರಿಟಿಷರು ಚನ್ನಮ್ಮನನ್ನು  ಬೈಲಹೊಂಗಲದಲ್ಲಿ  ಸೆರೆಯಲ್ಲಿಟ್ಟರು. ಸಂಗೊಳ್ಳಿ ರಾಯಣ್ಣನನ್ನು ಬ೦ಧಿಸಿ ನ೦ದಗಡ ದಲ್ಲಿ ಗಲ್ಲಿಗೆರಿಸಿದರು.  ಜನವರಿ ೨೬  ೧೮೩೧ರಂದು ಗಲ್ಲಿ ಗೇರಿಸಿದರು. ಸಂಗೊಳ್ಳಿ ರಾಯಣ್ಣ ಜನಿಸಿದ ದಿನಾಂಕವಾದ  ಆಗಸ್ಟ್ ೧೫  ೧೭೯೮ ,  ಭಾರತಕ್ಕೆ  ಸ್ವಾತಂತ್ರ್ಯ ದೊರೆತ ದಿನಾಂಕವಾದರೆ, ಆತ ಗಲ್ಲಿಗೇರಿದ ದಿನಾಂಕ  ಜನವರಿ ೨೬ , ಭಾರತವು  ಗಣರಾಜ್ಯವೆಂದು  ಘೋಷಿಸಿದ ದಿನಾಂಕವಾಗಿದೆ. ರಾಯಣ್ಣನ ಉಕ್ತಿ, “ನನ್ನ ಕೊನೆ ಆಸೆ ಏನೆಂದರೆ, ಮತ್ತೆ ನಾನು ಈ ದೇಶದಲ್ಲಿ...

ಕುರುಬರು ಭಾರತದ ಇತಿಹಾಸದ ಮೊದಲ ಸಾಮ್ರಾಜ್ಯವಾದ ಮೌರ್ಯ ಸಾಮ್ರಾಜ್ಯವನ್ನು ಕಟ್ಟಿದವರು.

ಕುರುಬ ಒಂದು ಹಿಂದು ಸಮುದಾಯದ ಹೆಸರು. ಕುರುಬ ಎಂದರೆ ಹುಡುಕುವ ಅಥವ ಪಡೆಯುವ ಎಂದು ಅರ್ಥ ಬರುತ್ತದೆ. ಉದಾಹರಣೆ: ಜೇನು ಕುರುಬ ಜಾತಿ ಎಂದರೆ ಜೇನು ಹುಡುಕುವ ಜಾತಿ. ಕುರುಬರು ಹಾಲುಮತ ಅನುಯಾಯಿಗಳು. ಕುರುಬ ಎಂದರೆ ಜ್ಞಾನವನ್ನು(ಭ) ಹುಡುಕುವವನು (ಕುರು) ಎಂಬ ದಾರ್ಮಿಕ ಅರ್ಥವು ಇದೆ. ಕುರುಬ ಜಾತಿಯು ಅತಿ ಪುರಾತನವಾದ ಜಾತಿ.  ಇತಿಹಾಸ ಪೂರ್ವ ಕುರುಬ ಜನಾಂಗ ತುಂಬಾ ಪುರಾತನವಾದ ಜನಾಂಗ , ರಾಮಾಯಣ ಮತ್ತು ಮಹಾಭಾರತ ಕಾಲದಲ್ಲಿ ಕುರು ವಂಶ ಮತ್ತು ಯದು ವಂಶಗಳ ಪ್ರಸ್ತಾವನೆಯಾಗಿದೆ. ಮಾನವನು ಮೊದಲು ಕಾಡುಗಳಲ್ಲಿ ಬೇಟೆ ಆಡಿ ಮತ್ತು ಅಲೀದು ಗೆಡ್ಡೆ, ಗೆಣಸು ತಿನ್ನುತಿದ್ದ , ಕ್ರಮೇಣ ಅವನು ಪ್ರಾಣಿಗಳನ್ನು ಪಳಗಿಸಿ ಸಾಕ ತೊಡಗಿದ, ಆ ನಂತರ ಅವನು ವ್ಯವಸಾಯ ಮಾಡುವದನ್ನು ಕಲಿತ, ನಂತರ ಅವನು ಹಳ್ಳಿಗಳಲ್ಲಿ ವಾಸಿಸ ತೊಡಗಿದ. ಕುರುಬರು ಈ ಎಲ್ಲ ಮಾನವನ ಆಯಾಮಗಳನ್ನು ದಾಟಿದವರು. ಅತಿ ಪುರಾತನವಾದ ಈ ಸಮುದಾಯದಿಂದ ಕಾಲ ಕ್ರಮೇಣ ಇತರೆ ಜನಾಂಗದವರು ಬೇರೆಯಾಗ ತೊಡಗಿದರು. ಉದಾಹರಣೆಗೆ ವಕ್ಕಲುತನ ಮಾಡುವನು ವಕ್ಕಲಿಗನಾದ, ಬೇಟೆಯಾಡು ವವನು ಬೇಡನಾದ , ಮಡಿಕೆ ಮಾಡುವವನು ಕುಂಬಾರನಾದ , ಈ ಇತರೆ ಜನಾಂಗದವರು ಮಾನವನ ಬೇಡಿಕೆಗಳಿಗೆ ಅನುಗುಣವಾಗಿ ತಮ್ಮ ವೃತ್ತಿಗಳನು ಮಾಡತೊಡಗಿದರು. ಹೀಗೆ ಪುರಾತನವಾದ ಕುರುಬ ಮತ್ತು ಯಾದವ ವಂಶಗಳಿಂದ ಸಣ್ಣ ಪುಟ್ಟ ಜಾತಿಗಳು ಹುಟ್ಟಿಕೊಂಡವು. ಭಾರತ ಇತಿಹಾಸ . ಕುರುಬರು ಭಾರತದ ಇತಿಹಾಸದ ಮೊದಲ ಸಾಮ್ರಾಜ್ಯವಾದ ಮೌರ್ಯ...

ಕುರುಬರ ಇತಿಹಾಸ ತಿಳಿಯಿರಿ

ಕುರುಬರ ಇತಿಹಾಸ ಪರಂಪರೆ, ಭಾಗ ೨೮ ಹಾಲುಮತ ಹುಕ್ಕಬುಕ್ಕ ಸಾಂಸ್ಕೃತಿಕ ಪ್ರತಿಷ್ಠಾನ ಬಳ್ಳಾರಿ ಕುರುಭರು.. ನಾವು ಕುರುಭರು ಕುರುಭರು ಇಚ್ಚಿಸಿದ್ದಲ್ಲಿ ಅವರಿಗೆ ವೈಷ್ಣವ ದೀಕ್ಷೆ ನೀಡುತ್ತೇನೆ :-- ಪೇಜಾವರ ಶ್ರೀ ಪಾದರು , ಉಡುಪಿ ನಿಮ್ಮ ಯಾವ ದೀಕ್ಷೆಯೂ ನಮಗೆ ಬೇಕಾಗಿಲ್ಲ , ಕುರುಭರು ತಾಯಿ ಗರ್ಭದಲ್ಲಿ ಇರುವಾಗಲೇ ದೀಕ್ಷೆ ಪಡೆದವರು :- ಸಿದ್ದರಾಮಯ್ಯ , ಪ್ರಸ್ತುತ ಮುಖ್ಯಮಂತ್ರಿ ವಾಹ್..! ಎಂಥಾ ಮಾತು ಸಿದ್ದರಾಮಯ್ಯ.. ಅಂದು ನನಗೆ ಸಿದ್ದರಾಮಯ್ಯ ಬಹಳವೇ ಇಷ್ಟವಾದರು , ಮನುಷ್ಯ ತನ್ನ ಕುಲದ ಸತ್ ಸಂಪ್ರದಾಯ ಬಿಟ್ಟುಕೊಡಲಿಲ್ಲ ...! ಭೇಷ್ ಎನಿಸಿತು.  ಕುರುಭರ ಇತಿಹಾಸ ತಿಳಿಯಿರಿ. ಕುರುಭರು ಮೂಲತಃ ನಾಗಕುಲದವರು ಎನ್ನಿಸಿಕೊಳ್ಳುವರು , ಪಲ್ಲವರು ಎಂದು ಕರ್ನಾಟಕದಲ್ಲಿ , ಪೊಲಿಯಾರ್ / ಪೊಲಯರ್ ಎಂದು ಕೇರಳದಲ್ಲಿ ಪಲ್ಲಿಗ ಎಂದು ಮಹಾರಾಷ್ಟ್ರದಲ್ಲಿ , ಉತ್ತರ ಭಾರತದೆಡೆ ಹಟ್ಟಿಗಾರರೆಂದು ಗುರುತಿಸಲ್ಪಡುತ್ತಾರೆ‌. ಕುರುಭ ( ಕುರು - ಪರತತ್ವ ಭ - ಗಳಿಸುವವ) ಎಂಬ ದೀಕ್ಷಾ ಪದ್ದತಿ. ಕುರುಭ ಒಂದು ಸಿದ್ದ ಶೈವ ಶಾಖೆ. ಕುರುಭರು ಅರ್ಥಾತ್ ಪಲ್ಲವರು 5-7ನೇ ಶತಮಾನದಲ್ಲಿ ಲಿಂಗ ದರಿಸುತ್ತಿದ್ದರು ಎಂಬ ವಿವರ ಶಾಸನಗಳಲ್ಲಿ ಇದೆ. ಪಲ್ಲವರ ಸಹೋದರ ವಂಶಾವಳಿ ಛಲವಾದಿ ಚಾಳುಕ್ಯ ಮಾದಿಗರು (ಕುರುಭರಲ್ಲಿ ಸಾದರು) ಸಹ ಲಿಂಗದಾರಿಗಳಾಗಿದ್ದ ವಿವರವಿದೆ. 2ನೇ ಶತಮಾನದಲ್ಲಿ ಭಾರತದ ವಂಶಸ್ಥರು ಭಾರ ಕುಲದ ಮಾದಿಗರು ಭಾರಶಿವ ನೆಂಬ ರಾಜ ...