Skip to main content

ಕುರುಬ ಬಂಧುಗಳೇ ನೀವು ಕೂಡ ಸಮಾಜದ ಅಭಿವೃದ್ಧಿ ಗಾಗಿ ಪಣ ತೊಡಿ

ನಮ್ಮ ಹಾಲುಮತ ಕುರುಬ ಸಮಾಜ ನಮಗೆ ಹೆಮ್ಮೆ
ನಮ್ಮ ಕನಕ ಗುರುಪೀಠ ನಮಗೆ ಶಕ್ತಿ...
----------------------------------------------------
ಕುರುಬರ ಶಕ್ತಿ ಪೀಠ ಶ್ರೀಕಾಗಿನೆಲೆ ಕನಕಗುರುಪೀಠಕ್ಕಾಗಿ ಪ್ರತಿನಿತ್ಯ
"ಒಂದೊಂದು ರೂಪಾಯಿ" ಕನಕ ಹುಂಡಿಗೆ ಹಾಕುತ್ತಿದ್ದೇವೆ.
ನಮ್ಮ ಮನೆಯಲ್ಲಿ ಇಬ್ಬರು ಎರಡೆರೆಡು ರೂಪಾಯಿಗಳನ್ನು ಹಾಕುತ್ತಿದ್ದೇವೆ.
ನನ್ನ ಆಫೀಸಿನಲ್ಲೂ ಒಂದು "ಕನಕ ಹುಂಡಿ"ಇಟ್ಟಿದ್ದೇನೆ.
ಅಲ್ಲೂಸಹ ಒಂದೊಂದು ರೂಪಾಯಿ " ಕನಕ ಹುಂಡಿ" ಗೆ ಹಾಕುತ್ತಿದ್ದೇನೆ.
ಶ್ರೇಷ್ಟ ಹಾಲುಮತ- ಕುರುಬ ಸಮಾಜದಲ್ಲಿ ಹುಟ್ಟಿದ್ದೇವೆ.
ಕುರುಬರ ಸಂಘಟನೆಗಾಗಿ, ಜಾಗೃತಿಗಾಗಿ ನಮ್ಮ ಕನಕ ಗುರುಪೀಠದ ಜಗದ್ಗುರುಗಳು ಶ್ರಮಿಸುತ್ತಿದ್ದಾರೆ. ನಾವು ಮಠಕ್ಕಾಗಿ ತ್ಯಾಗ ಮಾಡಲು ಸಾಧ್ಯವಾಗುವುದಿಲ್ಲ..
ಆದರೆ ನಮ್ಮ ಕುರುಬರ ಮಠಗಳಿಗಾಗಿ
" ದಿನಕ್ಕೊಂದು ರೂಪಾಯಿ" ಕೊಡಬಹುದಲ್ಲ.
ಒಂದು ರೂಪಾಯಿ ನನ್ನ ಮಠದ ಅಭಿವೃದ್ಧಿಗೆ ಕೊಡುತ್ತಿದ್ದೇನೆ ಎಂಬ ಆತ್ಮ ತೃಪ್ತಿಯೂ
ನನಗೆ / ನಿಮಗೆ ಇರುತ್ತದೆ.

"ಮನೆಯಲ್ಲೊಂದು ಕನಕ ಹುಂಡಿ, ಸಮಾಜಕ್ಕಾಗಿ ಒಂದೊಂದು ರೂಪಾಯಿ" ಅಭಿಯಾನ ಕಳೆದ ವರ್ಷ ಕನಕ ಜಯಂತಿಯ ದಿನದಿಂದ " ಶ್ರೀಕನಕಮಾಲೆ" ಅಭಿಯಾನದಲ್ಲಿ ಪ್ರಾರಂಭಿಸಿದ್ದೇವೆ.

ಈ ವರ್ಷದ 2019 ರ ನವೆಂಬರ್ ನಲ್ಲಿ ಕಾಗಿನೆಲೆಯಲ್ಲಿ ನಡೆಯುವ " ಶ್ರೀಕನಕದಾಸರ ತೊಟ್ಟಿಲೋತ್ಸವ - ಶ್ರೀ ಕನಕ ರಥೋತ್ಸವ" ಕಾರ್ಯಕ್ರಮದಂದು ಒಂದು ವರ್ಷದ ಹುಂಡಿ ಹಣವನ್ನು ಮಠಕ್ಕೆ ತಲುಪಿಸುತ್ತೇವೆ.
(ಎಲ್ಲರೂ ಕನಕ ಹುಂಡಿಗೆ ಒಂದು ರೂಪಾಯಿ ಹಾಕಿ ಮಠಕ್ಕೆ ತಲುಪಿಸಬೇಕೆಂಬುದು ನಮ್ಮಂತಹವರ ಕೋರಿಕೆ ಆದರೆ ಒತ್ತಾಯವಿಲ್ಲ. ಕಾಗಿನೆಲೆಗೆ ಆ ದಿನ ಬಾರದೇ ಇರುವವರು ". ಒಂದು ಮನೆಯಿಂದ 365 ರೂಪಾಯಿಗಳನ್ನು ಮನಿ ಆರ್ಡರ್ ಮೂಲಕವೂ ತಲುಪಿಸಬಹುದು)

ನಮ್ಮ ಸಮಾಜದ ಅಭಿವೃದ್ಧಿ ನಮ್ಮ ಕೈಯಲ್ಲಿ ಇದೆ.
ನಾನು ನನ್ನ ಅಲ್ಪ ಸೇವೆಯನ್ನು ನನ್ನ ಮನೆಯಿಂದ. "3 ಕನಕ ಹುಂಡಿ" ಗಳಿಗೆ ಒಂದೊಂದು ರೂಪಾಯಿ ಹಾಕುತ್ತಿದ್ದೇನೆ. " ನಮ್ಮಕುರುಬ - ಹಾಲುಮತ ಸಮಾಜ ನಮ್ಮಹೆಮ್ಮೆ " ನಮ್ಮ ಕನಕ ಗುರುಪೀಠ ನಮಗೆ ಶಕ್ತಿ" ಎಲ್ಲರಿಗೂ ಶುಭವಾಗಲಿ.

ದಿನಕ್ಕೊಂದು ರೂಪಾಯಿಯ ಅಭಿಯಾನ ಇಷ್ಟವಾದ್ದಲ್ಲಿ ನಿಮ್ಮ ಬಂಧುಗಳಿಗೆ ತಿಳಿಸಬಹುದು.
ನೀವು ತೊಡಗಿಸಿಕೊಳ್ಳಬಹುದು. ಹೆಚ್ಚು ಶೇರ್ ಮಾಡಲೂಬಹುದು..
ಇದು ಖಂಡಿತಾ ಒತ್ತಾಯವಲ್ಲ..

ನಿಮ್ಮ. ಆತ್ಮೀಯ ಬಂಧು :
ರಾಜು ಮೌರ್ಯ ದಾವಣಗೆರೆ.

Comments

Popular posts from this blog

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜೀವನ ಚರಿತ್ರೆಯನ್ನೊಮ್ಮೆ ಓದಿ

ಸಂಗೊಳ್ಳಿ ರಾಯಣ್ಣ  –  ಬ್ರಿಟಿಷರ  ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರಲ್ಲೊಬ್ಬ.  ಕಿತ್ತೂರು ಚೆನ್ನಮ್ಮಳ  ಬಲಗೈ ಬಂಟನಾದವನು ಸಂಗೊಳ್ಳಿ ರಾಯಣ್ಣ. ಪರಿಚಯ ಸಂಪಾದಿಸಿ ಬೆಳಗಾವಿ  ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿರುವ ನೇಗಿನಹಾಳ ಗ್ರಾಮವು ಕೆಂಚವ್ವನ ತವರು ಮನೆಯಾಗಿದ್ದರು ಸಂಗೊಳ್ಳಿಯು ರಾಯಣ್ಣನ ಜನ್ಮಸ್ಥಳ ಹಾಗೂ ಹೋರಾಟದ ಭೂಮಿಯಾಗಿದೆ. ಚೆನಮ್ಮಳ ಆಸ್ತಾನದಲ್ಲಿ ವಾಲಿಕರ್ ವೃತ್ತಿ ಮಾಡುವ ಕುರುಬ ಮನೆತನದವನಾಗಿದ್ದ ರಾಯಣ್ಣನನ್ನು ಜನ, ರಾಯಾ ಎಂದು ಕರೆಯುತ್ತಿದರು. ಅಷ್ಠೆ ಅಲ್ಲದೆ ಈತನು ಗೇರಿಲ್ಲಾ ತಂತ್ರದ ರೂವಾರಿಯಾಗಿದ್ದನು.  ಬ್ರಿಟಿಷರ  ವಿರುದ್ಧದ ಯುದ್ಧದಲ್ಲಿ ಚನ್ನಮ್ಮ ಹಾಗು ರಾಯಣ್ಣ ಇಬ್ಬರೂ ಸೆರೆಯಾಳಾದರು.  ಬ್ರಿಟಿಷರು ಚನ್ನಮ್ಮನನ್ನು  ಬೈಲಹೊಂಗಲದಲ್ಲಿ  ಸೆರೆಯಲ್ಲಿಟ್ಟರು. ಸಂಗೊಳ್ಳಿ ರಾಯಣ್ಣನನ್ನು ಬ೦ಧಿಸಿ ನ೦ದಗಡ ದಲ್ಲಿ ಗಲ್ಲಿಗೆರಿಸಿದರು.  ಜನವರಿ ೨೬  ೧೮೩೧ರಂದು ಗಲ್ಲಿ ಗೇರಿಸಿದರು. ಸಂಗೊಳ್ಳಿ ರಾಯಣ್ಣ ಜನಿಸಿದ ದಿನಾಂಕವಾದ  ಆಗಸ್ಟ್ ೧೫  ೧೭೯೮ ,  ಭಾರತಕ್ಕೆ  ಸ್ವಾತಂತ್ರ್ಯ ದೊರೆತ ದಿನಾಂಕವಾದರೆ, ಆತ ಗಲ್ಲಿಗೇರಿದ ದಿನಾಂಕ  ಜನವರಿ ೨೬ , ಭಾರತವು  ಗಣರಾಜ್ಯವೆಂದು  ಘೋಷಿಸಿದ ದಿನಾಂಕವಾಗಿದೆ. ರಾಯಣ್ಣನ ಉಕ್ತಿ, “ನನ್ನ ಕೊನೆ ಆಸೆ ಏನೆಂದರೆ, ಮತ್ತೆ ನಾನು ಈ ದೇಶದಲ್ಲಿ...

ಕುರುಬರು ಭಾರತದ ಇತಿಹಾಸದ ಮೊದಲ ಸಾಮ್ರಾಜ್ಯವಾದ ಮೌರ್ಯ ಸಾಮ್ರಾಜ್ಯವನ್ನು ಕಟ್ಟಿದವರು.

ಕುರುಬ ಒಂದು ಹಿಂದು ಸಮುದಾಯದ ಹೆಸರು. ಕುರುಬ ಎಂದರೆ ಹುಡುಕುವ ಅಥವ ಪಡೆಯುವ ಎಂದು ಅರ್ಥ ಬರುತ್ತದೆ. ಉದಾಹರಣೆ: ಜೇನು ಕುರುಬ ಜಾತಿ ಎಂದರೆ ಜೇನು ಹುಡುಕುವ ಜಾತಿ. ಕುರುಬರು ಹಾಲುಮತ ಅನುಯಾಯಿಗಳು. ಕುರುಬ ಎಂದರೆ ಜ್ಞಾನವನ್ನು(ಭ) ಹುಡುಕುವವನು (ಕುರು) ಎಂಬ ದಾರ್ಮಿಕ ಅರ್ಥವು ಇದೆ. ಕುರುಬ ಜಾತಿಯು ಅತಿ ಪುರಾತನವಾದ ಜಾತಿ.  ಇತಿಹಾಸ ಪೂರ್ವ ಕುರುಬ ಜನಾಂಗ ತುಂಬಾ ಪುರಾತನವಾದ ಜನಾಂಗ , ರಾಮಾಯಣ ಮತ್ತು ಮಹಾಭಾರತ ಕಾಲದಲ್ಲಿ ಕುರು ವಂಶ ಮತ್ತು ಯದು ವಂಶಗಳ ಪ್ರಸ್ತಾವನೆಯಾಗಿದೆ. ಮಾನವನು ಮೊದಲು ಕಾಡುಗಳಲ್ಲಿ ಬೇಟೆ ಆಡಿ ಮತ್ತು ಅಲೀದು ಗೆಡ್ಡೆ, ಗೆಣಸು ತಿನ್ನುತಿದ್ದ , ಕ್ರಮೇಣ ಅವನು ಪ್ರಾಣಿಗಳನ್ನು ಪಳಗಿಸಿ ಸಾಕ ತೊಡಗಿದ, ಆ ನಂತರ ಅವನು ವ್ಯವಸಾಯ ಮಾಡುವದನ್ನು ಕಲಿತ, ನಂತರ ಅವನು ಹಳ್ಳಿಗಳಲ್ಲಿ ವಾಸಿಸ ತೊಡಗಿದ. ಕುರುಬರು ಈ ಎಲ್ಲ ಮಾನವನ ಆಯಾಮಗಳನ್ನು ದಾಟಿದವರು. ಅತಿ ಪುರಾತನವಾದ ಈ ಸಮುದಾಯದಿಂದ ಕಾಲ ಕ್ರಮೇಣ ಇತರೆ ಜನಾಂಗದವರು ಬೇರೆಯಾಗ ತೊಡಗಿದರು. ಉದಾಹರಣೆಗೆ ವಕ್ಕಲುತನ ಮಾಡುವನು ವಕ್ಕಲಿಗನಾದ, ಬೇಟೆಯಾಡು ವವನು ಬೇಡನಾದ , ಮಡಿಕೆ ಮಾಡುವವನು ಕುಂಬಾರನಾದ , ಈ ಇತರೆ ಜನಾಂಗದವರು ಮಾನವನ ಬೇಡಿಕೆಗಳಿಗೆ ಅನುಗುಣವಾಗಿ ತಮ್ಮ ವೃತ್ತಿಗಳನು ಮಾಡತೊಡಗಿದರು. ಹೀಗೆ ಪುರಾತನವಾದ ಕುರುಬ ಮತ್ತು ಯಾದವ ವಂಶಗಳಿಂದ ಸಣ್ಣ ಪುಟ್ಟ ಜಾತಿಗಳು ಹುಟ್ಟಿಕೊಂಡವು. ಭಾರತ ಇತಿಹಾಸ . ಕುರುಬರು ಭಾರತದ ಇತಿಹಾಸದ ಮೊದಲ ಸಾಮ್ರಾಜ್ಯವಾದ ಮೌರ್ಯ...

ಕುರುಬರ ಇತಿಹಾಸ ತಿಳಿಯಿರಿ

ಕುರುಬರ ಇತಿಹಾಸ ಪರಂಪರೆ, ಭಾಗ ೨೮ ಹಾಲುಮತ ಹುಕ್ಕಬುಕ್ಕ ಸಾಂಸ್ಕೃತಿಕ ಪ್ರತಿಷ್ಠಾನ ಬಳ್ಳಾರಿ ಕುರುಭರು.. ನಾವು ಕುರುಭರು ಕುರುಭರು ಇಚ್ಚಿಸಿದ್ದಲ್ಲಿ ಅವರಿಗೆ ವೈಷ್ಣವ ದೀಕ್ಷೆ ನೀಡುತ್ತೇನೆ :-- ಪೇಜಾವರ ಶ್ರೀ ಪಾದರು , ಉಡುಪಿ ನಿಮ್ಮ ಯಾವ ದೀಕ್ಷೆಯೂ ನಮಗೆ ಬೇಕಾಗಿಲ್ಲ , ಕುರುಭರು ತಾಯಿ ಗರ್ಭದಲ್ಲಿ ಇರುವಾಗಲೇ ದೀಕ್ಷೆ ಪಡೆದವರು :- ಸಿದ್ದರಾಮಯ್ಯ , ಪ್ರಸ್ತುತ ಮುಖ್ಯಮಂತ್ರಿ ವಾಹ್..! ಎಂಥಾ ಮಾತು ಸಿದ್ದರಾಮಯ್ಯ.. ಅಂದು ನನಗೆ ಸಿದ್ದರಾಮಯ್ಯ ಬಹಳವೇ ಇಷ್ಟವಾದರು , ಮನುಷ್ಯ ತನ್ನ ಕುಲದ ಸತ್ ಸಂಪ್ರದಾಯ ಬಿಟ್ಟುಕೊಡಲಿಲ್ಲ ...! ಭೇಷ್ ಎನಿಸಿತು.  ಕುರುಭರ ಇತಿಹಾಸ ತಿಳಿಯಿರಿ. ಕುರುಭರು ಮೂಲತಃ ನಾಗಕುಲದವರು ಎನ್ನಿಸಿಕೊಳ್ಳುವರು , ಪಲ್ಲವರು ಎಂದು ಕರ್ನಾಟಕದಲ್ಲಿ , ಪೊಲಿಯಾರ್ / ಪೊಲಯರ್ ಎಂದು ಕೇರಳದಲ್ಲಿ ಪಲ್ಲಿಗ ಎಂದು ಮಹಾರಾಷ್ಟ್ರದಲ್ಲಿ , ಉತ್ತರ ಭಾರತದೆಡೆ ಹಟ್ಟಿಗಾರರೆಂದು ಗುರುತಿಸಲ್ಪಡುತ್ತಾರೆ‌. ಕುರುಭ ( ಕುರು - ಪರತತ್ವ ಭ - ಗಳಿಸುವವ) ಎಂಬ ದೀಕ್ಷಾ ಪದ್ದತಿ. ಕುರುಭ ಒಂದು ಸಿದ್ದ ಶೈವ ಶಾಖೆ. ಕುರುಭರು ಅರ್ಥಾತ್ ಪಲ್ಲವರು 5-7ನೇ ಶತಮಾನದಲ್ಲಿ ಲಿಂಗ ದರಿಸುತ್ತಿದ್ದರು ಎಂಬ ವಿವರ ಶಾಸನಗಳಲ್ಲಿ ಇದೆ. ಪಲ್ಲವರ ಸಹೋದರ ವಂಶಾವಳಿ ಛಲವಾದಿ ಚಾಳುಕ್ಯ ಮಾದಿಗರು (ಕುರುಭರಲ್ಲಿ ಸಾದರು) ಸಹ ಲಿಂಗದಾರಿಗಳಾಗಿದ್ದ ವಿವರವಿದೆ. 2ನೇ ಶತಮಾನದಲ್ಲಿ ಭಾರತದ ವಂಶಸ್ಥರು ಭಾರ ಕುಲದ ಮಾದಿಗರು ಭಾರಶಿವ ನೆಂಬ ರಾಜ ...